ಕಿನ್ನಿ ಚೆನ್ನಯ ಎಣ್ಮೂರು ಬೀಡಿನ ಬಲ್ಲಾಳನ ಓಲಗಕ್ಕೆ ಕೋಟಿ ಚೆನ್ನಯರನ್ನು ಕರೆದು ಕೊಂಡುಬಂದ. ದೇವಬಲ್ಲಾಳನು ಬಂಟರನ್ನು ಓಲಗ ಚಾವಡಿಗೆ ಸ್ವಾಗತಿಸಿ, ಯೋಗ ಕ್ಷೇಮ ವಿಚಾರಿಸಿ, ಅದರ ಹಿಂದಿನ ಸಮಾಚಾರವನ್ನು ಕೇಳಿ, ತನ್ನ ರಾಜ್ಯದಲ್ಲಿ ಸಹಸ್ರ ಕಾಲ ಸುಖವಾಗಿ ಇರಬೇಕೆಂದು ಸೂಚಿಸಿದನು. ಆಗ ಕಿನ್ನಿ ಚೆನ್ನಯನು ಬುದ್ಧಿ…… ನಮಗೆ ಬೇಕಾದ ಇವರು ಬೀಡಿನ ಹತ್ತಿರವೇ ಇರಬೇಕೆಂದು ಸೂಚಿಸಿದನು. ಕೋಟಿ ಚೆನ್ನಯರಿಗೆ ಕೊಡಬಹುದಾದ ಪ್ರದೇಶದ ಕುರಿತು ಹಲವು ಚಚರ್ೆಗಳಾದ ನಂತರ ಪಂಜದವರ ಗಡಿ ಪ್ರದೇಶದಲ್ಲಿರುವ ಅಯ್ಯನೂರನ್ನು ಬಲ್ಲಾಳರು ಕೊಡಲು ಮುಂದಾದರೂ ಪಂಜದವರ ಗಡಿ ತಕರಾರಿನಿಂದಾಗಿ ಅಲ್ಲಿ ಯಾರು ವಾಸಿಸುತ್ತಿರಲಿಲ್ಲ. ಅದು ಬಂಜರು ಭೂಮಿಯಾಗಿತ್ತು. ಕೊನೆಗೆ ಬಲ್ಲಾಳರು ಕೋಟಿ ಚೆನ್ನಯರನ್ನು ಕರೆದು, ಅಯ್ಯನೂರು ಕೃಷಿ ಭೂಮಿಯನ್ನು ಸೂರ್ಯಚಂದ್ರರಿರುವ ತನಕ ಅನುಭವಿಸಿಕೊಂಡು ಬಂದು ಬೀಡಿನ ಮಾರ್ಯದೆಯನ್ನು ಕಾಪಾಡಿಕೊಂಡು ಬರಬೇಕೆಂದು ಹೇಳಿ ಕೈವೀಳ್ಯ ಕೊಟ್ಟರು. ಮುಂದೆ ಅಯ್ಯನೂರು ಬೈಲನ್ನು ಬೇಸಾಯ ಮಾಡಿಕೊಂಡು ಇಲ್ಲಿಯ ವಿಷ್ಣುದೇವಾಲಯದ ಮಹಾವಿಷ್ಣು ಸ್ವಾಮಿಯನ್ನು ಅಚರ್ಿಸುತ್ತಾ…… ಪೂಜಿಸುತ್ತಾ ಸುಖವಾಗಿ ಕಾಲ ಕಳೆಯುತ್ತಿದ್ದರು.
ಎರಡು ಜನ ಬಲ್ಲಾಳ ಹುಲಿಗಳಿಂದ ತಪ್ಪಿಸಿಕೊಂಡ ಕೋಟಿ ಚೆನ್ನಯರು ಸುರಕ್ಷಿತವಾಗಿರುವುದನ್ನು ಕಂಡ ಬಲ್ಲಾಳರು ಮೈ ಪರಚಿ ಕೊಳ್ಳುವಂತಾಯಿತು. ಗಡಿಕಲ್ಲನ್ನು ಕಿತ್ತು ಮೊದಲಿದ್ದಲೆ ಹಾಕಿದ್ದು ಅಯ್ಯನೂರು ಬೈಲಿಗೆ ಯಾರು ಪ್ರವೇಶವಾಗಲು ಬಿಡದ್ದು, ಮೇಲಾಗಿ ಪಂಜ ಪ್ರದೇಶದಲ್ಲಿ ಆಗಾಗ ಬೇಟೆಯಾಡುತ್ತಿದ್ದುದು ಪಂಜ ಬಲ್ಲಾಳರಿಗೆ ಸಹಿಸಲಾಗದ ವಿಷಯವಾಗಿತ್ತು. ಪಂಜದ ಬಲ್ಲಾಳರಿಗೆ ಪಡುಪಲೆ ಬಲ್ಲಾಳರಿಗೆ ನಿಮ್ಮ ಬಿಲ್ಲವ ಕುಟ್ಟಿಗಳಿಂದ ಸಹಿಸಲಾಗದ ಆಪತ್ತುಗಳು ಬರುತ್ತವೆಯೆಂದೂ ತಿಳಿಸಿದನು. ಮುಂದೆ ಸುಲಭವಾಗಿ ಬಂಟರನ್ನು ನಾಶಪಡಿಸುವುದಕ್ಕಾಗಿ ಗೊಲ್ಲರ ಮೂಲಕ ವಿಷ ಹಾಲನ್ನು ಕಳುಹಿಸಿದರು. ಕಣಿಯರಿಂದ ಮಾಟ ಮಾಯ ಮಾಡಿಸಿದರು. ಆದರೆ ಯಾವ ಉಪಾಯವು ಫಲಿಸದೆ ಕೋಟಿ ಚೆನ್ನಯರ ಕೂದಲು ಕೂಡ ಅಲುಗಾಡಿಸಲು ಆಗಲಿಲ್ಲ.