ಕೋಟಿ – ಯಾರೂ ಇಲ್ಲ, ನಾವು ದಾರಿಯಲ್ಲಿ ಹೋಗುವವರು. ಪಯ್ಯ ಬೈದ್ಯ ಇದ್ದಾರೆಯೇ? ಎಂದು ಕೇಳಿದ. ಹೆಣ್ಣು ಸ್ವರ ಉತ್ತರ ಕೊಟ್ಟಿತ್ತು. ಅವರಿಲ್ಲ. ಕೋಟಿ ಚೆನ್ನಯರು ಕಾರ್ಯ ಸಿದ್ದಿಸಿತೆಂದು ಮುಖ ಮುಖ ನೋಡಿ ಹಸನ್ಮಖಿಗಳಾದರು.
ಚೆನ್ನಯ – ಎಲ್ಲಿ ಹೋಗಿದ್ದಾರೆ?
ಹೆಣ್ಣು ಸ್ವರ – ಮೂತರ್ೆಗಾಗಿ ಹೋಗಿದ್ದಾರೆ
ಕೋಟಿ – ಯಾವಾಗ ಬರುವುದು?
ಕಿನ್ನಿದಾರು ಮಾಸಮಾಡಿದ್ದೆನ್ನಲಾದ 16ನೇ ಶತಮಾನದ ಎಡಮಂಗಲ ಕಲ್ಲೆಂಬಿ ದೋಳದ ಮನೆ
ಹೆಣ್ಣು ಸ್ವರ – ಬೆಳಿಗ್ಗೆ ಹೋದರೆ ಮಧ್ಯಾಹ್ನ ಬರುವುದು ಮಧ್ಯಾಹ್ನ ಹೋದರೆ ಸಂಜೆ ಬರುವುದು. ಸಂಜೆಗೆ ಹೋದರೆ ರಾತ್ರಿ ಮೇಳೆ ಬರುವುದು. ಈಗ ಬರುವ ಹೊತ್ತಾಯಿತು, ಕುಳಿತುಕೊಳ್ಳಿ. ನೂಲು ಹಾಕಿದ ಬ್ರಾಹ್ಮಣರಾದರೆ ಕೆಂದಾಳಿಯ ಪದ್ಮ ಕಟ್ಟೆ ಇದೆ. ಒಕ್ಕಲಿಗರಾದರೆ ಚಪ್ಪರ ಇದೆ. ಜಾತಿಯವರಾದರೆ ಮೊಗಸಾಲೆಯಲ್ಲಿ ತೂಗುಯ್ಯಾಲೆ ಇದೆ ಎಂದಳು.
ಗಂಡಸರು ಇಲ್ಲದ ಮನೆಯೊಳಗೆ ತಲೆ ಹಾಕುವುದು ಸರಿಯಲ್ಲವೆಂದು ಕೋಟಿ ಚೆನ್ನಯರು ಹೇಳಿಕೊಂಡು ಚಪ್ಪರದಲ್ಲಿ ಇದ್ದ ಹಾಸು ಕಂಬಳಿಯಲ್ಲಿ ಕುಳಿತರು. ವೀಳ್ಯದ ಸಂಚಿಯನ್ನು ಬಿಚ್ಚಿ ಬಾಯಿ ಕೆಂಪಗೆ ಮಾಡಿದರು. ಚೆನ್ನಯನಿಗೆ ಅಡಿಕೆಯ ಅಮುಲು ತೆಲೆಗೇರಿತು. ಕೋಟಿಯು ನಮಗೆ ಒಂದು ಗಿಂಡಿ ನೀರು ಬೇಕಾಗಿದೆ ಎಂದು ಕೇಳಿದನು.
ಗಂಡಸರಿಲ್ಲದೆ ಮನೆಯ ಹೊರಗೆ ತಾನು ಕಾಲಿಡುವುದು ಸರಿಯಲ್ಲವೆಂದು ಈ ತನಕ ತೋರಿದರೂ ಕಿನ್ನಿದಾರು ಕಲ್ಲು ಕಟ್ಟಿದ ಬಾವಿಗೆ ಬಂದು ನೀರು ಎತ್ತಿ ಬಿಂದಿಗೆಯಲ್ಲಿ ತುಂಬಿಸಿ ಕೋಟಿ ಚೆನ್ನಯರು ಕುಳಿತ ಪಕ್ಕದಲ್ಲಿ ಬಿಂದಿಗೆಯನ್ನು ಇಟ್ಟಳು. ಆದರೆ ಅಣ್ಣ ತಮ್ಮಂದಿರು ನೀರು ಮುಟ್ಟದೆ ಹಾಗೆ ಕುಳಿತಿದ್ದರು. ಕಿನ್ನಿದಾರು ನೀರು ಇಟ್ಟಿದಗದ್ದೇನೆ ಅಂದಳು. ಅದಕ್ಕೆ ಕೋಟಿಯು ನೀರು ಮುಟ್ಟಬೇಕಾದರೆ, ಹುಟ್ಟುಬುಡ ಹೇಳಬೇಕು, ಜಾತಿ ಕುಲ ತಿಳಿಯಬೇಕು ಎಂದನು. ಕಿನ್ನಿದಾರು ಬಂಟರ ಮುಖ ನೋಡಿದಳು. ಕೋಟಿ ಚೆನ್ನಯರ ಮುಖದ ಭಾವನೆಯಲ್ಲಿ ವಂಚನೆ ಮೋಸದ ನೋಟವಿಲ್ಲ. ತಿಳಿನೆಗೆಯ ಮುಖದಲ್ಲಿ ಬಾಂಧವ್ಯದ ಭಾವನೆ ತೋರುತ್ತದೆ. ಮಾತಿನ ಸ್ವರದಲ್ಲಿ ಕುಟುಂಬ ಪ್ರೇಮ ಕಂಡು ಬರುತ್ತದೆ. ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡ ಕಿನ್ನಿದಾರು ತನ್ನ ಪರಿಚಯಕ್ಕೆ ಪ್ರಾರಂಭಿಸಿದಳು ಈ ಹೊತ್ತಿಗೆ ಬಂದ ಪಯ್ಯ, ಹೆಂಡತಿ ಪರಪುರುಷರಲ್ಲಿ ಏನು ಮಾತಾಡುವಳೆಂದು ಕೇಳುವುದಕ್ಕಾಗಿ ಮನೆಯ ಹಿಂಬಾಗಿಲಿನಿಂದ ಮನೆಯ ಒಳಗೆ ಬಂದನು. ಅಂಗಳದ ಚಪ್ಪರದಡಿಯಲ್ಲಿ ಮಾತಾಡುತ್ತಿದ್ದ ಕಿನ್ನಿದಾರು ಮತ್ತು ಬಂಟರ ಮಾತುಗಳನ್ನು, ಮನೆಯ ಚಾವಡಿಯ ಕಿಟಕಿಯಿಂದ ಆಲಿಸಲು ಪ್ರಾರಂಭ ಮಾಡಿದ.
ಕಿನ್ನಿದಾರು ಪಡುಮಲೆಯಲ್ಲಿ ತಾಯಿ ಹುಟ್ಟಿದ ಕತೆ. ತನ್ನನ್ನು ಹೊತ್ತು ಸಾಕಿ ಸಲಹಿ ಮದುವೆ ಮಾಡಿಕೊಟ್ಟ ವಿವರ, ಅನಂತರ ತಾಯಿಯು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿ ಮೂರು ತಿಂಗಳಲ್ಲಿ ಸ್ವರ್ಗವಾಸಿಯಾದ ಕತೆ ಹೇಳಿ, ಈ ನನ್ನ ಅವಳಿ ತಮ್ಮಂದಿರು ಈಗ ಬೆಳೆದು ದೊಡ್ಡವರಾಗಿದ್ದಾರಂತೆ! ಅವರು ಪ್ರತಾಪಿಗಳೆಂದು ಊರವರು ಹೇಳಿದ್ದನ್ನು ಕೇಳಿದ್ದೇನೆ. ನೀರಿನಿಂದ ಎದ್ದು ಬೆಂಕಿಯಂತೆಯೂ, ನೆಲದಿಂದ ಬಂದ ಸಿಡಿಲಿನಂತೆಯೂ ಅವರ ಪೌರುಷ ಪರಾಕ್ರಮಗಳಂತೆ! ಎಂದಾಗ ಕೋಟಿ ಅಕ್ಕಾ ನಿನ್ನ ಹೆಸರು? ಕಿನ್ನಿದಾರು ಎಂದು ಹೇಳಿಮುಗಿಸುವಷ್ಟರಲ್ಲಿ, ಅಕ್ಕಾ ಎಂದರೆ ನೀನೇ ಸೈ, ತಮ್ಮಂದಿರೆಂದರೆ ನಾವೇ ಸೈ ಎಂದರು. ಕಿನ್ನಿದಾರುವಿನ ಪಾದದ ಮೇಲೆ ತಲೆಯಿಟ್ಟು ಅಡ್ಡ ಬಿದ್ದರು. ಇಬ್ಬರನ್ನು ಎರಡು ಕೈಗಳಿಂದ ಎತ್ತಿ ಕೆನ್ನೆ, ಕಣ್ಣು, ಹಣೆ, ಎದೆ, ಮೂಗು ಕೊರಳು ಮುಂತಾದ ಕಡೆ ತನ್ನ ಕೈಯಾನ್ನಾಡಿಸಿ, ಹಣೆಗೆ ಮುತ್ತಿಕ್ಕಿ, ಇಬ್ಬರನ್ನೂ ಮನೆಯ ಒಳಗೆ ಕರೆದುಕೊಂಡು ಹೋಗಿ, ತೂಗುಯ್ಯಾಲೆಯಲ್ಲಿ ಕುಳ್ಳಿರಿಸಿದಲು. ಆ ಹೊತ್ತಿಗೆ ಮನೆಯ ಹೊರ ಬಾಗಿಲಿನ ಕಿಟಕಿಯಿಂದ ಯಾರೋ ಹಾರುವ ಶಬ್ದ ಕೇಳಿಸಿತು. ಪಯ್ಯ ಓಡುವುದೂ ಕಾಣಿಸಿತು. ಚೆನ್ನಯ ಒಟ್ಟಿಗೆ ಓಡಿದನು. ಕಿನ್ನಿದಾರು ಅದು ನಿನ್ನ ಭಾವ ಎಂದು ಕರೆದು ಹೇಳಿದಳು. ಕೋಟಿ ಮತ್ತು ಕಿನ್ನಿದಾರು ಹಿಂದಿನಿಂದ ಒಟ್ಟಿಗೆ ಹೋದರು. ಪಯ್ಯಬೈದ್ಯ ಪಾದೆ ಎಂಬಲ್ಲಿಯ ಮುಂಡೋವು ಬಲ್ಲೆಯೊಳಗೆ ಅವಿತು ಕುಳಿತುಕೊಂಡನು. ಕೋಟಿ ಚೆನ್ನಯರು ನೀರು ಒಸರುತ್ತಿದ್ದ ಪಾದೆಯಲ್ಲಿ ಪಯ್ಯನ ಪಾದದ ಗುರುತನ್ನು ನೋಡಿ, ಮುಂಡೋವು ಬಲ್ಲೆಯೊಳಗೆ ಕುಳಿತದ್ದ ಪಯ್ಯನಿಗೆ… ಬಾವ ನೀವು ಹೆದರುವುದು ಯಾಕೆ? ನಾವು ನಿಮ್ಮ ಪತ್ನಿಯ ತಮ್ಮಂದಿರು, ಎಂದು ಮೊದಲಾಗಿ ಪರಿಚಯ ಕೊಟ್ಟರು. ಕಿನ್ನಿದಾರು ತಮ್ಮಂದಿರಿಗೆ ಅವರ ಸ್ವಭಾವವೆ ಹಾಗೆ ಅಂದವಳು- ಬನ್ನಿ ಎಂದು ಕರೆದಳು. ಬಲ್ಲೆಯಿಂದ ಹೊರಬಂದ ಪಯ್ಯ ಭಾವಂದಿರೊಡನೆ ಕೂಡಿಕೊಂಡು ಮನೆಗೆ ಬಂದನು. ಈಗ ಕಿನ್ನಿದಾರುವಿನ ಗೌಜಿಯೇ ಗೌಜಿ. ಎಣ್ಣೆ ಹಚ್ಚಿ- ವೀಯಲು ಬಿಸೀರು, ರೊಟ್ಟಿ, ಕೋಳಿ ಮಾಂಸದ ಅಡುಗೆ – ನಿತ್ಯ ಸಮ್ಮಾನವೇ ಸಂಮಾನ.
ಹೀಗೆ ಕೆಲವು ದಿನ ಕಳೆಯಿತು. ಅದೊಂದು ದಿನ ಪಯ್ಯನನೊಡನೆ ಪಂಜದ ಬಲ್ಲಾಳರನ್ನು ಕೇಳಿದರು. ನಾವು ಪಂಜದ ಬಲ್ಲಾಳರ ವಿಷಯ ಕೇಳಿದ್ದೇವೆ. ನಾವು ಅಕ್ಕ ಮತ್ತು ನಿಮ್ಮನ್ನು ಕಂಡು ಮಾತಾಡಿದ ಮೇಲೆ ಪಂಜದ ಬಲ್ಲಾಳರ ಬೀಡಿಗೆ ಹೋಗಿ ಅವರ ಅಸರೆ ಪಡೆದು ಪಂಜದ ರಕ್ಷಕರಾಗಿ ವಿಂಚಬೇಕೆಂಬ ಅಸೆಯಿರಿಸಿಕೊಂಡೇ ಬಂದಿದ್ದೇವೆ…. ಅಂದರು. ಆಗ ಪಯ್ಯ ಬೈದ್ಯನು ಒಳ್ಳೆಯ ವಿಷಯವನ್ನು ಮುಂದಿಟ್ಟಿದ್ದೀರಿ. ಹಿಂದೆ ನಾನು ಪಂಜದ ಬಲ್ಲಾಳರ ಮಂತ್ರಿಯಾಗಿದ್ದರೂ ಈಗ ಚೆಂದುಗಿಡಿಯೆಂಬವನು ಬಲ್ಲಾಳರ ಮಂತ್ರಿಯಾಗಿದ್ದಾನೆ. ಅವನನ್ನು ಕಂಡೇ ಬಲ್ಲಾಳರ ಭೇಟಿಯಾಗಬೇಕು. ಇತರರಿಂದ ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದ. ಆಗ ಚೆನ್ನಯ ಆತ ಎಲ್ಲಿ ಸಿಗಬಹುದು ಎಂದು ಕೇಳಿದ. ಅದಕ್ಕೆ ದೂರ ಹೋಗಬೇಕಿಲ್ಲ ಅವನು ಇಲ್ಲಯ ಮದರ್ೂರು ಉಪಬೀಡಿಗೆ ನಿತ್ಯ ಬರುತ್ತಾನೆ. ಬೀಡಿನ ಪಕ್ಕದಲ್ಲಿ ಪಂಜ ಬಲ್ಲಾಳರು ಒಂದು ಗರಡಿ ಶಾಲೆ ತೆರೆದಿದ್ದಾರೆ. ಯುವಕರಿಗೆ ಗರಡಿ ಸಾಧನೆ ಕಲಿಸುವವನೇ ಚೆಂದುಗಿಡಿ. ಅಲ್ಲಿಯೇ ಅವನನ್ನು ಕಂಡು ಮಾತನಾಡೋಣ ಎಂದು ಭರವಸೆ ಇತ್ತ. ಬಂಟರು ಹಾಗೆಯೇ ಅಗಲಿ ಅಂದರು. ಒಂದೆರಡು ದಿನ ಕಳೆದಿತ್ತು. ಬಂಟರು ಭಾವನೊಂದಿಗೆ ಮದೂರು ಗರಡಿ ಶಾಲೆಗೆ ಹೊರಟರು. ಭಾವನೊಂದಿಗೆ ಕೋಟಿ ಚೆನ್ನಯರು ಗರಡಿ ಶಾಲೆಯತ್ತ ಬರುವುದನ್ನು ಚೆಂದುಗಿಡಿ ಕಂಡು ಇವರು ಸಾಮಾನ್ಯರಲ್ಲವೆಂದು ತಿಳಿದುಕೊಂಡು, ಇವರಲ್ಲಿ ಮಾತಾಡುವುದೇ ಬೇಡವೆಂದು ಬಾಗಿಲು ಹಾಕಿ ಗರಡಿ ಶಾಲೆಯ ಮೂಲೆಯಲ್ಲಿ ಕುಳಿತು ಬಿಟ್ಟ. ಕೋಟಿ ಚೆನ್ನಯರು ಕರೆದರೂ ಸುದ್ದಿಯಿಲ್ಲ. ಗರಡಿ ಶಾಲೆಯಲ್ಲಿ ಇದ್ದುದನ್ನೂ ಬಾಗಿಲು ಹಾಕಿಕೊಂಡದನ್ನೂ ಬಂಟರು ಗಮನಿಸಿದ್ದರು. ಇವನು ಗರಡಿ ಶಾಲೆಯ ಒಳಗೆ ಇದ್ದಾನೆಂದು ತಿಳಿದು ಗಟ್ಟಿಯಾಗಿ ಕರೆದರು. ಸುದ್ದಿಯಿಲ್ಲ. ಕಡೆಗೆ ಬಾಗಿಲನ್ನು ಒಡೆದು ಒಳನುಗ್ಗಿದರು. ಚೆಂದುಗಿಡಿಯನ್ನು ಮಾತಾಡಿಸಿದರು. ಚೆಂದುಗಿಡಿ ಬಾಗಿಲು ಹಾಕಿಕೊಂಡ ಬಗೆಗೆ ಏನೇನೋ ಹೇಳಿಕೊಂಡು ಬಂಟರನ್ನು ಒಪ್ಪಿಸಿಕೊಂಡ.
ನಿಮಗೇನು ಬೇಕಾಗಿದೆ? ಚೆಂದುಗಿಡಿ ಪ್ರಶ್ನಿಸಿದ. ನಮಗೆ ಗರಡಿ ಸಾಧನೆ ಕಲುಯಬೇಕೆಂದು ಆಸೆಯಾಗಿದೆ. ಹಾಗೆ ಬಂದಿದ್ದೇವೆ. ನೀವು ಕುಸ್ತಿ ಕಲ್ತಿದ್ದಿರಾ ಚೆಂದುಗಿಡಿಯ ಪ್ರಶ್ನೆ. ಅಲ್ಪ ಸ್ವಲ್ಪ ಕಲಿತಿದ್ದೇವೆ ಎಂದರು. ಹಾಗಾದರೆ ಎಷ್ಟು ಕಲಿತಿದೀರಿ ನೋಡಬಹುದೇ ಚೆಂದುಗಿಡಿ ಹೇಳಿದಾಗ ಚೆನ್ನಯ ನೀವು ಅವಶ್ಯವಾಗಿಯೂ ಪರೀಕ್ಷಿಸಲೇಬೇಕು ಎಂದವನು ಚೆಂದುಗಿಡಿಯ ಎದುರು ಸೆಟೆದು ನಿಂತ. ಚೆಂದುಗಿಡಿಯ ಮನಸ್ಸಿನಲ್ಲಿ ಕೋಲಾಹಲವೆ ಉಂಟಾಯಿತು. ಬೇಕೆಂತಲೇ ಎದುರು ಹಾಕಿ ಕೊಂಡೆನೆಂದು ಪರಿತಪಿಸಿದನು ಉಪಾಯವಿಲ್ಲದೆ ಚೆನ್ನಯನ ಎದುರಾಗಬೇಕಾಯಿತು. ಇಬ್ಬರೂ ಒಬ್ಬರನೊಬ್ಬರನ್ನು ಹಿಡಿದು ಕೊಂಡು ಬಲ ಪರೀಕ್ಷೆ ತೋರಿಸಿ ಕೊಂಡರು. ಆದರೇನು ನಿಮಿಷಾರ್ಧದಲ್ಲಿ ಚೆಂದುಗಿಡಿ ಸೋಲುತ್ತಿದ್ದ ಎಷ್ಟು ಪ್ರಯತ್ತಿಸಿದರೂ ಚೆಂದುಗಿಡಿ ಸೋಲನ್ನೇ ಅನುಭವಿಸಬೇಕಾಯಿತು. ಮತ್ತೂ ಮತ್ತೂ ಪ್ರಯತ್ನಿಸಿದ. ಕಡೆಗೆ ಚೆನ್ನಯ ಹಿಡಿತಕ್ಕೆ ಬಲಿಯಾಗಿ ಬಿಡಿಸಿಕೊಳ್ಳಲಾಗದೆ-ಬಿಟ್ಟು ಬಿಡು ಮಹಾರಯ ಎಂದನು. ಚೆನ್ನಯ- ಚೆಂದುಗಿಡಿ ನಿನ್ನನ್ನು ಗುರುವೆಂದು ಸ್ವಿಕರಿಸಲೇ ಕೇಳಿದನು. ನಾನಲ್ಲ ಗುರು ನೀನೇ ನನ್ನ ಗುರು ಬಿಟ್ಟು ಬಿಡು ಎಂದಾಗ ಗಂಟಲು ಒಣಗಿ ನಾಲಗೆ ತಡವರಿಸಿತ್ತು. ಚೆನ್ನಯ ಚೆಂದುಗಿಡಿಯನ್ನು ಬಿಟ್ಟು ಬಿಟ್ಟ. ಚೆಂದುಗಿಡಿ ಬದುಕಿದೆನೆಂದು ಮನಸ್ಸಿನಲ್ಲಯೇ ಅಂದುಕೊಂಡ. ಮುಂದೆ ಸಮಾಧಾನದಿಂದಲೇ ಮಾತು ಕತೆ ನಡೆಯಿತು. ಚೆಂದುಗಿಡಿಯ ಒಡಲಿನಲ್ಲಿ ಮಾತ್ರ ಸೇಡಿನ ಜ್ವಾಲೆ ಉರಿಯುತ್ತಲೆ ಇತ್ತು. ಕಣ್ಣು ಕಟ್ಟಿನ ಹಾದಿಯಲ್ಲಿ ಕೋಟಿ ಚೆನ್ನಯರನ್ನು ಹೊಗಳಿದ. ಕೋಟಿ ಚೆನ್ನಯರು ಪಂಜದ ಬಲ್ಲಾಳರ ಭೇಟಿ ಮಾಡಿಸಲು ಕೇಳಿಕೊಂಡರು. ಅದಕ್ಕೇನು ಅಡ್ಡಿ. ನಾನು ಭೇಟಿ ಮಾಡಿಸುತ್ತೇನೆ ಎಂದು ಬೊಗಳೆ ಮಾತುಗಳನ್ನು ನಂಬುವಂತೆ ಹೇಳಿದ. ಚೆಂದುಗಿಡಿಯನ್ನು ನಂಬಿದ ಬಂಟರು ಆದಷ್ಟು ಬೇಗನೆ ಭೇಟಿ ಮಾಡಿಸು ಎಂದು ಹೇಳಿ ಹೊರಟರು.
ಚೆಂದುಗಿಡಿಗೆ ಚೆನ್ನಯನ ಹಿಡಿತ ಸಾಕಾಗಿತ್ತು. ಈ ಬಂಟರನ್ನು ಬಲ್ಲಾಳರಿಗೆ ತೋರಿಸಿದರೆ ನನ್ನ ಗತಿ ಕೊನೆಗೊಂಡಂತೆ ಎಂದು ಕೊಂಡನು, ಇವರನ್ನು ಹೇಗಾದರೂ ಮುಗಿಸಲೇ ಬೇಕೆಂದು ತೀಮರ್ಾನಕ್ಕೆ ಬಂದ.
ಟಿಪ್ಪಣಿ : ನೇರಂಕಿ ಮಾಗಣೆಯ ಮಧ್ಯಭಾಗದಲ್ಲಿ ಕುಮಾರ ಧಾರ ಹೊಳೆ ಹರಿಯುತ್ತದೆ. ನೇರೆಂಕಿ ಮಾಗಣೆಯ ಇಂದಿನ ಎಡಮಂಗಲ ಮತ್ತು ದೋಲ್ಡ್ವಾಡಿ ಗ್ರಾಮಗಳು ಹೊಳೆಯ ದಕ್ಷಿಣಕ್ಕೆ ಇವೆ. ಈ ಪ್ರದೇಶ ಕ್ರಿ. ಶ. ಸುಮಾರು 1510ಕ್ಕೆ ಪಂಜದ ಬಲ್ಲಾಳರಿಗೆ ಸೇರಿತ್ತು. ಎಡಮಂಗಲದಲ್ಲಿ ಇದ್ದ ನೇರಂಕಿ ಹೆಗ್ಡೆಯರಸನ ಮದರ್ೂರು ಉಪಬೀಡು ಮುಂದೆ ಪಂಜದ ಬಲ್ಲಾಳರ ಉಪಬೀಡಾಗಿ ಮುಂದುವರಿಯಿತು. ಇಂಗ್ಲಿಷರ ಕಾಲದಲ್ಲಿ ಗ್ರಾಮಗಳು ಪುನರ್ರಚನೆಯಾದಾಗ ಎಡಮಂಗಲ ಪ್ರದೇಶಕ್ಕೆ ಅನೇಕ ಸಣ್ಣ ಪುಟ್ಟ ಗ್ರಾಮಗಳು ಕೂಡಿ ಎಡಮಂಗಲ ಗ್ರಾಮವಾಯಿತು. ಇದೇ ವೇಳೆ ಪಂಜ ಮಾಗಣೆ ಕೇರ್ಪಟ ಗ್ರಾಮವೂ ಎಡಮಂಗಳ ಗ್ರಾಮಕ್ಕೆ ಸೇರಿದಂತೆ ಕಂಡುಬರುವುದು. ಕಲ್ಲೆಂಬಿ ಪ್ರಾಚೀನ ಕಾಲದ ಒಂದು ಗ್ರಾಮ. ಕಲ್ಲೆಂಬಿ ದೋಳದಲ್ಲಿ ಪಂಜ ಬಲ್ಲಾಳರ ಮಂತ್ರಿಯಾಗಿ ಪಯ್ಯ ಬೈದ್ಯನಿದ್ದನೆಂದು ಪಾಡ್ದನ ಸಾರ, ಮುಂದೆ-ಪಂಜ ಬೀಡಿಗೆ ಕೇಮರ ಬಲ್ಲಾಳರು ರಾಜರಾದ ಮೇಲೆ ಚೆಂದುಗಿಡಿ ಪಂಜಕ್ಕೆ ಬಂದವನು ಪಯ್ಯ ಬೈದ್ಯನನ್ನು ಹಿಂದೆ ಸರಿಸಿ ಚೆಂದುಗಿಡಿಯೇ ಮಂತ್ರಿಯಾದನೆಂದು ಪ್ರತೀತಿ.
ಪಯ್ಯ ಪಡುಮಲೆಯ ದೇಯಿ ಬೈದೆತಿಯ ಏಳು ವರ್ಷದ ಮಗಳು ಕಿನ್ನಿದಾರುವನ್ನು ಮದುವೆಯಾಗಿದ್ದನು. ಕಿನ್ನಿದಾರುವನ್ನು ಮದುವೆಯಾದವನು ಕಿನ್ನಿದಾರುವನ್ನು ತಾಯಿ ಮನೆಗೆ ಕಳುಹಿಸಲೇ ಇಲ್ಲ. ತವರು ಮನೆಯಿಂದ ಯಾರೊಬ್ಬರೂ ಇತ್ತ ಬರಲಿಲ್ಲ. ಯಾವ ತಾಪವೂ….. ಏನು ಭೇದವೊ? ಕಿನ್ನಿದಾರು ಮಾತ್ರ ತವರಿಗೆ ವಂಚನೆಗೆ ಈಡಾದಳು. ಪಯ್ಯ ಬೈದ್ಯ ಅಡಿಗಡಿಗೆ ಕಿನ್ನಿದಾರುವನ್ನು ಸಂಶಯದಿಂದಲೇ ನೋಡುತ್ತಿದ್ದ.
ಪಯ್ಯ ಬೈದ್ಯನ ಮನೆ ಇಂದಿನ ಕಾಲಕ್ಕೆ ಸಾಮಾನ್ಯ ಎಂದು ಭಾವಿಸಿದರೂ ಅಂದಿನ ಕಾಲದ ಶ್ರೀಮಂತರ ಮನೆಯ ಸಾಲಿಗೆ ಸೇರಿರಬಹುದು. ಮನೆಗೆ ಮಣ್ಣಿನ ಗೋಡೆ, ಮಾಡಿಗೆ ಮುಳಿ ಹುಲ್ಲಿನ ಚಾವಣಿ, ಏತದಿಂದ ನೀರು ಎತ್ತುವ ಬಾವಿ. ಮನೆಯ ಬಲಬದಿಯಲ್ಲಿ ಕೆಂದಾಳಿ ತೆಂಗಿನ ಮರದ ಪದ್ಮ ಕಟ್ಟೆ. ಮನೆಯ ಎದುರು ಭಾಗದಲ್ಲಿ ಸಣ್ಣ ಹಂದರ. ಮನೆ ಹಿಂಬದಿಯಲ್ಲಿ ಮನೆಗೆ ತಾಗಿ ಕೊಂಡಿರುವ ಕೋಳಿ ಗೂಡು. ಮನೆಯ ಹಿಂಬದಿಯಲ್ಲಿ ಜೋಡು ಹಟ್ಟಿಗಳು. ಹೀಗೆ ಅಂದಿನ ಕಿನ್ನಿದಾರು ಮನೆಯನ್ನು ಪಾಡ್ದನ ವಿವರಿಸುತ್ತದೆ.
ಇಂದು ಬಲಬದಿಯಲ್ಲಿ ಕಟುಂಬದ ಧರ್ಮದೈವದ ದೈವಾಲಯ ಎಡಬದಿಯಲ್ಲಿ ಕೊಟ್ಟೆ ಇದೆ. ಅಂದಿನ ಮನೆಯೆಂದು ಹೇಳಳಾಗುವ ಕಿನ್ನಿದಾರು ಮನೆ ಹಾಗೆಯೇ ಉಳಿದಿದೆ. ಮನೆಯನ್ನು ವಿಸ್ತರಿಸುದಾಗಲೀ….ಕುಂಠಿತಗೊಳಿಸುವುದಾಗಲೀ ನಿಷೇಧವೆಂದು, ನಂಬಿಕೆ ಇದ್ದುದರಿಂದ ಹಾಗೆಯೇ ಉಳಿಸಿಕೊಂಡಿದ್ದಾರೆ. ಮನೆಗೆ ತೊಡಿಸಿದ ಮರದ ತೊಲೆಗಳಲ್ಲಿ ಈಗವಾದರೆ ಮೂರು ನಾಲ್ಕು ಮಾಡಬಹುದೆಂದು ಕಾಣುಸುತ್ತದೆ. ತಗ್ಗಿನ ಬಾಗಿಲಿದ್ದು ಇವುಗಳಿಗೆ ಉಪಯೋಗಿಸಿದ ಮರ ಭಾರಿ ಗಾತ್ತ ಹೊಂದಿದೆ. ಮನೆಯ ಎದುರಿನ ಚಾವಡಿಯಲ್ಲಿ ಅಂದಿದ್ದ ತೂಗು ಉಯ್ಯಾಲೆ ಈಗಲೂ ಇದೆ. ಇದನ್ನು ದೇವರ ತೂಗು ಉಯ್ಯಾಲೆಯೆಂದು ಕರೆಯುತ್ತಾರೆ.
ಮನೆಯ ಎದುರಿನ ಏತದ ಬಾವಿ ಈಗಲೂ ಇದ್ದೂ ಈ ಮನೆಯವರು ಈ ಮನೆಯ ನೀರನ್ನೇ ಉಪಯೋಗಿಸುತ್ತಾರೆ. ದೈವ ದೇವರ ತಂಬಿಲಕ್ಕೆ ಮಾತ್ತ ಕೂಟಾಜೆಯಲ್ಲಿರುವ ಬಾವಿಯಿಂದಲೇ ನೀರು ತರುವ ಪದ್ಧತಿ. ಪೂಜಾರಿಗಳು ಈ ಕೊಳದಿಂದಲೇ ನೀರು ತೆಗೆದು ಸ್ನಾನಮಾಡಬೇಕೆಂದು ನಿಯಮವೂ ಇದೆ. ಈ ಮನೆಗೆ ಶದ್ಧ ಮುದ್ರಿಕೆಯಲ್ಲಿ ಹೆಚ್ಚಿನ ಸ್ಥಾನಮಾನವಿದೆ. ಮೈಲಿಗೆಯಾದರೆ ನಾಗರಾಜ ಕಾಣಿಸಿ ಕೊಳ್ಳುವುದಲ್ಲದೆ ಬಾವಿಯ ನೀರು ಸೆಗಣಿ ನೀರಿನಂತೆ ಪರಿವರ್ತನೆಯಾಗುವುದಂತೆ! ಮನೆಯನ್ನು ಶುದ್ಧವಿಟ್ಟುಕೊಳ್ಳುವುದೇ ಪರಿಹಾರವೆಂದು ಮನೆಯಲ್ಲಿದ್ದವರು ಹೇಳುವರು.
ಕಿನ್ನಿದಾರು ಮನೆ ಎದುರುಗಡೆ ಇರುವ ಕೋಟಿ ಚೆನ್ನಯರ ಪ್ರತೀವೆಂದು ಹೇಳಲಾಗುವ ತಾಳೆ ಮರಗಳು
ಈ ಮನೆಯ ಒಡೆಯ ತನ್ನ ಕುಟುಂಬದೊಂದಿಗೆ ಮಡಿಕೇರಿಯ ಸೋಮವಾರ ಪೇಟೆಯಲ್ಲಿ ವಾಸ ವಾಗಿರುವನು ವಿಶೇಷ ಸಂದರ್ಭಗಳಲ್ಲಿ ಇಲ್ಲಿಗೆ ಬಂದು ನಂಬಿಕೆಯು ಆರಾಧನೆ ಮುಗಿಸಿ ಹೋಗುವರಂತೆ! ಮನೆಯಲ್ಲಿ ಇತರರು ವಾಸವಾಗಿದ್ದು ಮನೆಗೆ ಸಂಬಂಧ ಪಟ್ಟ ಕೃಷಿ ಕಾರ್ಯವನ್ನು ಮುಂದುವರಿಸಿ ಕೊಂಡು ಹೋಗುತ್ತಾರೆ. ಆಗಾಗ ಈ ವ್ಯವಸ್ಥೆಯಲ್ಲಿ ಕುಟುಂಬಗಳು ಬದಲಾವಣೆಯಾಗುವುದೂ ಇದೆಯಂತೆ.
ಬೈಲಬದಿಯ ತಡಮೆಯನ್ನು ದಾಟಿ ಗದ್ದೆ ಹುಣಿಗೆ ಕಾಲಿಡುವಾಗ ನಮ್ಮನ್ನು ಸ್ವಾಗತಿಸುವಂತೆ ಕಂಡು ಬರುವ ಎರಡು ತಾಳೆಮರಗಳು ವಿಸ್ಮಯವನ್ನು ಉಂಡು ಮಾಡುತ್ತದೆ. ಭಾರಿ ಗಾತ್ರದ ಈ ಮರಗಳಲ್ಲಿ ಹಲವು ವ್ಯತ್ಯಾಸಗಳು ಕಂಡು ಬರುತ್ತಾವೆ ಒಂದು ಸ್ವಲ್ಪ ತಗ್ಗಾಗಿದ್ದು, ಎತ್ತರವಾಗಿ ಬೆಳೆದ ಇನ್ನೊಂದರಿಂದ ಕೊಬ್ಬಿ ಬೆಳೆದಂತೆ ಕಂಡು ಬರುತ್ತದೆ. ಈ ಮರಗಳಲ್ಲಿ ಒಂದು ಸತ್ತರೆ ಇನ್ನೊಂದು ಉಳಿಯುವುದಿಲ್ಲ. ಅದೂ ಸತ್ತು ಹೋಗುತ್ತದೆ. ಅದೇ ಸ್ಥಳದಲ್ಲಿ ಅವಳಿ ಮಕ್ಕಳಂತೆ ಇನ್ನೆರಡು ಹುಟ್ಟಿ ಬೆಳೆಯುತ್ತವೆ. ಇದು ಅಂದಿನಿಂದ ಬೆಳೆದು ಬಂದ ಒಂದು ರೂಢಿಯಂತೆ ಕಂಡುಬರುವುದು. ಇಲ್ಲಿ ಕಿನ್ನಿದಾರು ನೇಮ ತಂಬಿಲ ನಡೆಯುತ್ತಿದ್ದು ಬೈದೇರ್ಕಳ ನೇಮ ಮಾತ್ರ ಇಲ್ಲಿ ನಡೆಯುವ ಪದ್ಧತಿಯಿಲ್ಲ.