ಕೋಟಿ ಚೆನ್ನಯರ ಕಾಲ ನಂತರ ಮುಂದೆ ಕಾಣಿಯೂರು ಮಠಕ್ಕೆ ಸೇರಿದ ಈ ಪ್ರದೇಶದಲ್ಲಿ ಹಲವಾರು ಕುಟುಂಬಗಳು ಸಾಗುವಳಿಗೆ ನೆಲೆಸಿದರು. ಆದರೆ ಅವರಿಗೆ ಏಳಿಗೆಯು ಸಿಗದೆ ಅಲ್ಲಿ ನಿಲ್ಲಲಾರದೆ ಹೋದರು. ಮುಂದೆ ಕಾಡು ಬೆಳೆಯಿತು. ಕ್ರಿ.ಶ. ಸುಮಾರು 1950 ನಂತರ ಗೌಡ ಕುಟುಂಬವೊಂದು ಮಠದಿಂದ ಮೂಲಗೇಣಿಗೆ ಈ ಏರಾಜೆ ಬಾರಿಕೆಯನ್ನು ಪಡಕೊಂಡು ಸಾಗುವಳಿ ಪ್ರಾರಂಭಿಸಿದರು. ಇಲ್ಲಿ ಮಣ್ಣು ಅಗೆಯುವಾಗ ಗರಡಿಗೆ ಸಂಬಂಧ ಪಟ್ಟ ಆಯಿಧಗಳು ದೊರೆತವಂತೆ. ಮುಂದೆ ಈ ಕುಟುಂಬಕ್ಕೆ ಅನೇಕ ತೊಂದರೆಗಳು, ಕಷ್ಟಗಳು ಒದಗಿದರಿಂದ ಆ ಸ್ಥಳವೇ ಬಿಟ್ಟು ಹೊಗ ಬೇಕಾಯಿತು. ಅನಂತರ ಈ ಸ್ಥಳಕ್ಕೆ ಪ್ರಸಿದ್ದರೊಬ್ಬರು ಸೇರಿ ಅಡಿಕೆ ತೋಟ ಮಾಡಿದರು. ಇವರಿಗೂ ಕೂಡ ಇಲ್ಲಿ ನೆಮ್ಮದಿ ಸಿಗದೆ ಈ ಸ್ಥಳವನ್ನೆ ತೊರೆದು ಹೋದರು.
ಇಲ್ಲಿಂದ ಸುಮಾರು ಐದು ಕಿಲೋ ಮೀಟರು ದೂರದಲ್ಲಿ ಚಾವರ್ಾಕ ಗ್ರಾಮದಲ್ಲಿ ಎಣ್ಣೂರು ಎಂಬ ಸ್ಥಳವಿದೆ. ಇಲ್ಲಿ ಕೋಟಿ ಚೆನ್ನಯರ ಆಪ್ತ ಬಿಲ್ಲವನ ಮನೆಯಿತ್ತು. ಎಣ್ಣೂರಿನ ಕೋಟಿ ಚೆನ್ನಯರು ಇಲ್ಲಿಗೆ ಆಗಾಗ ಬರುತ್ತಿದ್ದರಿಂದ ಈ ಮನೆಗೆ ಎಣ್ಣೂರು ಎಂಬ ಹೆಸರಾಯಿತೆಂದೂ ಹಲವರ ಅಭಿಪ್ರಾಯ.
ಈ ಮನೆಯಲ್ಲಿ ಹೆಚ್ಚಾಗಿ ಅವಳಿ ಜವಳಿ ಮಕ್ಕಳು ಹುಟ್ಟುತ್ತಾರೆ. ಎಣ್ಣೂರಿನಲ್ಲಿ ನೇಮವು ಪ್ರಾರಂಭವಾಗುವಾಗ ಈ ಮನೆಯವರನ್ನು ಕೋಟಿ ಪೂಜಾರಿಯಾಗಿ ನೇಮಿಸಿಕೊಂಡದ್ದು ಕುತೂಹಲಕ್ಕೆ ಎಡೆಯಾಗಿದೆ. ಅಂದಿನ ಕಾಲದಲ್ಲಿ ಕೋಟಿ ಚೆನ್ನಯರಿಗೆ ಪ್ರಿಯರಾಗಿದ್ದು ಆ ಮನೆಯವರಿಗೇ ಪೂಜಾರ್ಮೆ ಒದಗಿಸಿರಬಹುದೆಂದು ತಿಳಿಯಬಹುದು. ಎಣ್ಣೂರಿನ ಗರಡಿ ಸ್ಥಾಪನೆಯಾಗಿ ನೇಮ ತಂಬಿಲ ನಡೆದುಬರುತ್ತದೆ.
ಕಾಯಿಮಣ ಗ್ರಾಮದಲ್ಲಿ ಅಂಕತಡ್ಕ ಪ್ರಸಿದ್ಧ ಸ್ಥಳ. ಇಲ್ಲಿ ಇಲ್ಲಿ ಎರಡು ತಂಡಕ್ಕೆ ಕಲಹ ಉಂಟಾಗಿ ಜಗಳವಾದಾಗ ಒಂದು ಕಡೆಗೆೆ ಕೋಟಿ ಚೆನ್ನಯರು ನಿಂತು ದೊಡ್ಡ ಹೋರಾಟವಾಯಿತೆಂದೂ, ಹೋರಾಟದಲ್ಲಿ ಅನೇಕ ಹೆಣಗಳು ಬಿದ್ದ ಕತೆಯಿದೆ. ಜಗಳ ನಿಂತ ಮೇಲೆ ಜಗಳಕ್ಕೆ ಉಪಯೋಗಿಸಿದ ಅನೇಕ ತಾತ್ಕಾಲಿಕ ಆಯುಧಗಳನ್ನು ಅಲ್ಲಿಯೇ ಇದ್ದ ಬಾವಿಗೆ ಹಾಕಿದರೆಂದು ತಿಳಿದು ಬರುವುದು. ಈ ಬಾವಿ ಭಾಗಶಃ ಮುಚ್ಚಿ ಹೋದರೂ ಈ ಬಾವಿಗೆ ಯಾರು ಇಳಿಯುವಂತಿಲ್ಲ. ಇಳಿದವರು ಅನೇಕ ಕಷ್ಟಗಳಿಗೆ ಈಡಾದ ವಿವರಣೆ ಸ್ಥಳೀಯರು ಹೇಳುತ್ತಾರೆ. ಇಲ್ಲಿರುವ ಕುಟುಂಬಕ್ಕೆ ಪವಾಡ ಸದೃಶವಾಗಿ ತೊಂದರೆಗಳು ಕಂಡು ಬಂದವು. ಜೋಯಿಸರ ಸಲಹೆ ಮೇರೆಗೆ ಗರಡಿ ಸ್ಥಾಪಿಸಿ ನೇಮತಂಬಿಲಗಳನ್ನು ಪ್ರಾರಂಭಿಸಿದ ಮೇಲೆ ಸುಖವುಂಟಾಯಿತೆಂದು ತಿಳಿದು ಬರುವುದು.