ಈ ಮೌಕಿಕ ಕತೆಯ ಒರಕಾರ ದೇರಣ್ಣ ಗೌಡನ ಪ್ರೇಯಸಿಯೊಬ್ಬಳ ಮೇಲೆ ರಾಜ ಕಟುಂಬಕ್ಕೆ ಬೇಕಾಗಿದ್ದ ಯುವಕನೊಬ್ಬನಿಂದ ಮಾನ ಭಂಗದ ಸೂಚನೆಗಳು ಸಿಕ್ಕಿದಾಗ ದೇರಣ್ಣ ಗೌಡ ಅಪ್ರತಿಭನಾದ. ಇಲ್ಲಿ ಉಳಿಯಲೇ? ತನ್ನ ಆಶಾ ಗೋಪುರ ಛದ್ರವಾಗುತ್ತದೆ. ತಲೆ ತಪ್ಪಿಸಿಕೊಂಡು ಹೋದರೆ ರಾಜ ವಿರೋದಕ್ಕೆ ತುತ್ತಾಗಬೇಕಾಗುವುದು. ಹಾಗಿದ್ದಾರೆ ನನ್ನನು ರಕ್ಕಿಸುವರು ಯಾರು? ಎಂಬ ಪ್ರಶ್ನೆ ಉದ್ಭವವಾದಾಗ ಎಣ್ಮೂರು ದೇವ ಬಲ್ಲಾಳರ ನೆನಪಾಯಿತು. ರಕ್ಷಣೆ ಕೊಡ ಬಲ್ಲವರು ತುಳುನಾಡಿನಲ್ಲಿ ಅವರೇ…… ಒಬ್ಬರು. ಆದುದರಿಂದ ಅವರ ರಕ್ಷಣೆ ಪಡೆಯುವುದೇ ಸೂಕ್ತವೆಂದು ತೀಮರ್ಾನಿಸಿ ದೇರಣ್ಣ ಗೌಡ ತನ್ನ ಪ್ರೇಯಸಿಯೊಂದಿಗೆ ರಾತ್ತಿ ವೇಳೆ ಹೊರಟವನು ಎಣ್ಮೂರು ಕಡೆಗೆ ಪಯಣ ಬೆಳೆಸಿ ಎಣ್ಮೂರ ಬೀಡಿಗೆ ತುಲುಪಿದನು. ಬೀಡಿನ ಪಕ್ಕದಲ್ಲಿಯೇ ಜನಾಶ್ರಯವಿಲ್ಲದ ಭೂಮಿ ಇತ್ತು. ಆಕ್ರಿಕೆ ಸಸ್ಯಗಳೇ ಬೆಳೆದು ತುಂಬಿದ ಈ ಪ್ರದೇಶಕ್ಕೆ ಆಕ್ರಿಕಟ್ಟೆ ಎಂಬ ಹೆಸರೇ ಇತ್ತು. ಈ ಭೂಮಿಯನ್ನೇ ಬಲ್ಲಾಳರು ದೇರಣ್ಣ ಗೌಡನಿಗೆ ಒದಗಿಸಿ ದೇರಣ್ಣ ಗೌಡನ ಆಶ್ರಯದಾತರಾದರು. ತನ್ನ ರಾಜ್ಯಕ್ಕೂ ಒಂದು ಗರಡಿ ಸಾಧನೆಯ ಶಾಲೆ ಬೇಕೆಂದು ಆಶಿಸುತ್ತಿದ್ದ ಬಲ್ಲಾಳರು ದೇರಣ್ಣ ಗೌಡನ ಮನೆಯ ಪಕ್ಕದ ಪಡ್ಪ ಎಂಬಲ್ಲಿ ಗರಡಿ ಶಾಲೆ ತೆರೆದು ದೇರಣ್ಣ ಗೌಡನಿಂದ ಗರಡಿ ಸಾಧನೆಯನ್ನು ಊರ ಯುವಕರಿಗೆ ಕಲಿಸುವ ಏಪರ್ಾಡು ಮಾಡಿದರು.
ದೇವ ಬಲ್ಲಾಳರ ಬೀಡಿನ ಸಮೀಪದಲ್ಲಿರುವ ಈಗಿನ ಐವತ್ತೊಕ್ಲು ಮನೆ
ವಿಟ್ಲದಲ್ಲಿ ಗರಡಿ ಸಾಧನೆ ಕಲಿಯುತ್ತಿದ್ದಾಗ ಮಮ್ಮಾಲಿಯ ಗುರು ಇದ್ದಕ್ಕಿದ್ದ ಹಾಗೆ ನಾಪತ್ತೆಯಾದ ಗುರುವಿನಿಂದ ವಿದ್ಯೆ ಕಲಿತಾಗಿದ್ದರೂ ಗುರು ಕಾಣಿಕೆ ಅಪರ್ಿಸಿ ಆಶೀವರ್ಾದ ಪಡೆಯಲು ಬಾಕಿ ಇತ್ತು ಇದು ಪೂರೈಸದ ಮಮ್ಮದೆ ಚಿಂತಿತನಾದ ಕುರಿಯಕ್ಕೆ ಬಂದವನಿ ಗುರುವಿನ ಸುಳಿವಿಗಾಗಿ ಪರಿತಪಿಸುತ್ತಿದ್ದಾಗ ದೂರದ ಸುದ್ದಿಯಿಂದ ಎಣ್ಮೂರಿಗೆ ಗುರು ಸೇರಿದ ಸಿದ್ದಿ ಸಿಕ್ಕಿತು. ಹಾಗೆ…… ಕುರಿಯದಿಂದ ಹೊರಟವನು ಎಣ್ಮೂರಿನ ಅಕ್ರಿಕಟ್ಟೆಗೆ ಬಂದಿಳಿದನು. ಗುರುವಿನೊಡನೆ ಮಾತಾಡಿ ಗುರುವಿಗೆ ಗುರು ಕಾಣಿಕೆ ಅಪರ್ಿಸಿ ಆಶ್ರೀವರ್ಾದ ಪಡೆದನು. ಗುರು ಬೀಡಿಗೆ ಹೊರಟಾಗ ಮಮ್ಮದೆಯೂ ಗುರುವಿನೊಂದಿಗೆ ಬೀಡಿಗೆ ಹೋದನು. ಒಳ ಮನೆಯಲಿದ್ದ ಬಲ್ಲಾಳರು ಹೊರಗೆ ಬಂದು ನೋಡುತ್ತಾರೆ! ನಿಂತಿದ್ದ ಮಮ್ಮಾಲಿ! ಇಬ್ಬರಾಗಿದ್ದ ಕೋಟಿ ಚೆನ್ನಯರು ಒಂದಾಗಿ ಬಂದು ನಿಂತ ಹಾಗೆ ಕಂಡಿತು. ಅಜಾನುಬಾಹುಗಳಿದ್ದು ಜಗ ಜಟ್ಟಿಯಂತೆ ಕಾಣುತ್ತಿದ್ದ ಮಮ್ಮಾಲಿಯನ್ನು ಕಂಡ ಬಲ್ಲಾಳರು ಮೈ ಮರೆತು ನೋಡಿದರು. ಕುಶಲ ವಾತರ್ೆಗಳಾದ ಮೇಲೆ ಬಲ್ಲಾಳರು ಮಾನ ಸನ್ಮಾನ ಮಾಡಿದರು…. ಮಮ್ಮಾಲಿಯನ್ನು ತನ್ನ ಬೀಡಿನ ಬಂಟನಾಗಿ ನಿಲ್ಲುವಂತೆ ಕೇಳಿಕೊಂಡರು. ಬಲ್ಲಾಳರ ಅಪೇಕ್ಷೆಯಂತೆ, ಮಮ್ಮಾಲಿ ದಂಡಿನ ನಾಯಕನಾಗಿ ಬೀಡಿಗೆ ಸೇರಿಕೊಂಡ. ಮಮ್ಮಾಲಿಗೆ ಕೋಟಿ ಚೆನ್ನಯರ ಅಯ್ಯನೂರು ಪ್ರದೇಶವನ್ನು ಕೊಟ್ಟು ಆಸರೆಯನ್ನು ಕಲ್ಪಸಿದರು.
ಬಲ್ಲಾಳರು ಉಗಿಯುತ್ತಿದ್ದ ಪೀಕದಾನಿ
ಪುತ್ತೂರು ಹೆಗ್ಡೆ ಬೀಡಿಗೆ ಸೇರಿದ ಗುತ್ತುಗಳಲ್ಲಿ ಕುರಿಯ ಗುತ್ತು ಪ್ರಸಿದ್ಧವಾಗಿತ್ತು. ಗುತ್ತಿನ ಒಡೆಯ ಆಕಸ್ಮಿಕವಾಗಿ ಮರಣ ಪಟ್ಟಾಗ ಗುತ್ತಿನ ಒಡತಿಯೇ ಗುತ್ತು ಗಾರ್ತಿಯಾಗಿ ಮುಂಚೂಣಿಯಲ್ಲಿ ನಿಲ್ಲಬೇಕಾಯಿತು. ಗುತ್ತಿನ ಪ್ರದೇಶದಲ್ಲಿ ಮುಸ್ಲಿಂ ಕುಟುಂಬಬೊಂದಿತ್ತು. ಈ ಕುಟುಂಬದ ಯುವಕನೊಬ್ಬ ಪುತ್ತೂರು ಹೆಗ್ಡೆ ಅರಸನ ಸೈನಿಕ ಮುಖಂಡನಾಗಿದ್ದನು. ಈತ ತಂದೆ ತಾಯಿ ಕಳಕೊಂಡು, ತಾನು ಹೊಸದಾಗಿ ಮದುವೆಯಾದ ಪತ್ನಿಯೊಡನೆ ವಾಸವಾಗಿದ್ದನು. ಆಗ ಸಾರ್ವಭೌಮರಾಗಿ ವಿಜಯನಗರದ ರಾಮರಾಯನು ಆಳುತ್ತಿದ್ದನು. ತುಳು ನಾಡಿನ ಅಧೀನ ಅರಸನಾಗಿ ಇಕ್ಕೇರಿಯ ಸಣ್ಣ ಸಂಕಣ್ಣ ನಾಯಕ ಆಳುತ್ತಿದ್ದ. ವಿಜಯ ನಗರದ ರಾಮ ರಾಯನಿಗೆ ಮತ್ತು ಬಹುಮನಿ ಸುಲ್ತಾನರಿಗೆ ಮನಸ್ತಾಪಗಳು ಹೆಚ್ಚುತ್ತಾ ಬಂದು ಮಹಾ ಯುದ್ಧದ ಸೂಚನೆಗಳು ಕಂಡು ಬಂದವು. ಈ ಯುದ್ದ ಗೆಲ್ಲುವುದಕ್ಕಾಗಿ ಅಪಾರ ಸೈನ್ಯದ ಅವಶ್ಯಕತೆ ಮತ್ತು ಧನ ಸಂಪತ್ತು ಬೇಕಾಗಿತ್ತು. ಸಂಕಣ್ಣ ನಾಯಕ, ತುಳುನಾಡಿನ ಮಾಂಡಲಿಕರಿಗೆ ಮತ್ತು ಬೀಡಿನ ಬಲ್ಲಾಳರಿಗೆ-ವೀರ ಸೈನಿಕರೊಂದಿಗೆ ಯುದ್ಧದ ಖಚರ್ಿಗಾಗಿ ನಿಧಿ ಸಂಗ್ರಹಿಸಿ ಕೊಡುವಂತೆ ರಾಜ ಪ್ರತಿನಿಧಿಯ ಮೂಲಕ ಆಜ್ಞೆ ಕಳುಹಿಸಿದ. ಈ ಸುತ್ತೋಲೆ ಪುತ್ತೂರು ಹೆಗ್ಡೆಯರಸನ ಬೀಡಿಗೆ ಬಂದಾಗ ರಾಜ, ಬೀಡಿನ ಚಾವಡಿಯಲ್ಲಿ ಸಭೆ ಕರೆದನು. ನಾಲ್ಕು ಗುತ್ತಿನ ಮುಖಂಡರು ಮತ್ತು ಸೈನಿಕ ನಾಯಕರು ಓಲಗದ ಚಾವಡಿಯಲ್ಲಿ ಸೇರಿದರು. ಯುದ್ಧದ ಖಚರ್ಿಗೆ ಸಂಪತ್ತು ಕೂಡಿ ಹಾಕಿದರು. ಯುದ್ಧಕಾಗಿ ತೆರಳಬೇಕಾದ ಯುವಕರ ಕುರಿತಾಗಿ ಮಾತುಕತೆಗಳು ಆರಂಭವಾದವು. ದಂಡಿನ ನಾಯಕ ಮುಸ್ಲಿಂ ಯುವಕ ಮುಂದಾಗಿ ಹೊರಟು ನಿಂತಾಗ ಕುರಿಯದ ಗುತ್ತುಗಾತರ್ಿ ಎದ್ದು ನಿಂತು. ಮುಸ್ಲಿಂ ಯುವಕ ಯುದ್ಧಕ್ಕೆ ಹೋಗುವುದನ್ನು ಆಕ್ಷೇಪಿಸಿದಳು. ಹೊಸದಾಗಿ ಮದುವೆಯಾದ ಈ ಯುವಕ ಯುದ್ಧಕ್ಕೆ ಹೋದಲ್ಲಿ ಈತನ ಹೆಂಡತಿ ಏಕಾಂಗಿಯಾಗುತ್ತಾಳೆ. ಅವಳು ತುಂಬಿದ ಗಭರ್ಿಣಿಯಾಗಿದ್ದು ಅವಳ ರಕ್ಷಣೆಯ ಭಾರ ಹೊರುವವರು ಯಾರು ಇಲ್ಲಾದ ಕಾರಣ ಅವನನ್ನು ಕಳುಹಿಸುವುದು ಯೋಗ್ಯವಲ್ಲವೆಂದು ಹೇಳಿದಳು. ಆದರೆ ಮುಸ್ಲಿಂ ಯುವಕ ನಮ್ಮ ಸೌರ್ವಭೌಮರಿಗೆ ಒದಗಿದ ಯುದ್ಧಕ್ಕೆ ನಾನು ಹೋಗಲೇ ಬೇಕಾಗಿದೆ. ಸೈನಿಕನಾಗಿ ಸೇರಿದ ಮೇಲೆ ಹೆಂಡತಿ ಮಕ್ಕಳೆಂಬ ಮಮತೆಯಿಂದ ಹಿಂದೆ ಉಳಿಯುವುದು ಧರ್ಮವಲ್ಲ. ನಾನು ಯುದ್ಧಕೆ ತೆರೆಳದೆ ಹೋದರೆ ಕರ್ತವ್ಯ ಪಾಲನೆಯಲ್ಲಿ ಹಿಂದೆ ಬಿದ್ದಂತಾಗುವುದು. ಎಂದು ಹೇಳಿದನು. ಗುತ್ತುಗಾರ್ತಿಗೆ ಹೊಣೆಗಾರಿಕೆಯ ಕೆಲಸವೊಂದಕ್ಕೆ ಕೇಳಿಕೊಂಡ ತಾನು ಯುದ್ಧಕ್ಕೆ ತೆರಳಿದವನು, ಯುದ್ಧದಿಂದ ಮರಳಿ ಬರುವ ತನಕ ನನ್ನ ಪತ್ನಿಯನ್ನು ಕಾಪಾಡಿ ರಕ್ಷಣೆ ಮಾಡುವಂತೆ ಗುತ್ತುಗಾರ್ತಿಯನ್ನೇ ಕೇಳಿಕೊಂಡನು. ಗುತ್ತುಗಾರ್ತಿ ಸಂತೋಷದಲ್ಲಿ ಒಪ್ಪಿಕೊಂಡಳು.
ಮುಸ್ಲಿಂ ಯುವಕ ಯುದ್ಧಕ್ಕೆ ತೆರಳಿದನು. ತಾಳಿಕೋಟೆಯ ಕದನ. ಯುದ್ಧ ಮಾತ್ರ ವಿಜಯ ನಗರಕ್ಕೆ ಅಪಜಯವಾಗಿ ವಿಜಯನಗರ ಪತನವಾಯಿತು. ಮುಸ್ಲಿಂ ಯುವಕ ರಣರಂಗದಲ್ಲಿ ಮಡಿದು ಹೋದನು. ಇತ್ತ ಈತನ ಪತ್ನಿ ಗಂಡು ಮಗುವಿಗೆ ಜನ್ಮ ಕೊಟ್ಟು ದೇವರ ಪಾದ ಸೇರಿದಳು. ಮಗುವಿನ ಲಾಲನೆ ಪಾಲನೆಯ ಭಾರ ಗುತ್ತುಗಾರ್ತಿಗೆ ತಾನಾಗಿಯೇ ಒದಗಿ ಬಂತು. ಗುತ್ತುಗಾರ್ತಿ ಈ ಮಗುವನ್ನು ತನ್ನ ಮಗುವೆಂದೇ ಭಾವಿಸಿ ಸಾಕಿದಳು. ಮುದ್ದಾದ ಮಗು ಗುತ್ತುಗಾರ್ತಿಯ ಪ್ರೀತಿಯ ಕಂದನಾಗಿಯೇ ಬೆಳೆದನು. ಈತನಿಗೆ ಮಮ್ಮದೆ/ಮಮ್ಮಾಲಿಯೆಂದು ನಾಮಕರಣ ಮಾಡಿದಳು. ಆದರೆ ಮುದ್ದಿನಿಂದ ಕುಂಞಯೆಂದು ಕರೆಯ ತೊಡಗಿದಳು. ಈ ಮಗು ಯಾವ ಕೊರತೆಯೂ ಇಲ್ಲದೆ ಗುತ್ತಿನ ಮನೆಯಲ್ಲಿ ಗುತ್ತಿನ ಮಗನಂತೆ ಬೆಳೆದನು. ಹುಡುಗನಾಗಿ ಬೆಳೆದ ಮೇಲೆ ಗುತ್ತಿನ ಮನೆಯ ನಿತ್ಯದ ಕೆಲಸಗಳಲ್ಲಿ ತಾನೂ…. ಸಹ ಭಾಗಿಯಾಗುತ್ತಿದ್ದ. ಅದೊಂದು ದಿನ ದನಗಳನ್ನು ಮೇಯುಸಲು ಹೋದವನು ಅರಳಿ ಮರದ ಕಟ್ಟೆಯಲ್ಲಿ ಕುಳಿತು ಅರಳಿ ಮರಕ್ಕೆ ಒರಗಿ ನಿದ್ದೆ ಹೋದನು. ಮರಗಳ ಎಲೆಗಳೆಡೆಯಿಂದ ಸೂರ್ಯ ಕಿರಣ ಮುಖಕ್ಕೆ ಬೀಳ ತೊಡಗಿತು. ಆ ಹೊತ್ತಿಗೆ ಇದನ್ನು ಕಂಡ ನಾಗರ ಹಾವೊಂದು ಮಮ್ಮಾಲಿಯ ಮುಖಕ್ಕೆ ಬೀಳುವ ಸೂರ್ಯ ಕಿರಣಕ್ಕೆ ಅಡ್ಡವಾಗಿ ಹೆಡೆ ಬಿಚ್ಚಿ ನಿಂತಿತು. ಎಷ್ಟೋ ಹೊತ್ತು ಕಳೆದಿರಬಹುದು. ಗೋಪಾಲಕರಲ್ಲಿ ಕೆಲವರು ಇಲ್ಲಿಗೆ ಬಂದು ನೋಡಿದಾಗ ನಾಗರ ಹಾವನ್ನು ಕಂಡು ಬೊಬ್ಬೆ ಹಾಕಿದರು. ನಾಗರ ಹಾವು ಮುದುಡಿಕೊಂಡು ತನ್ನ ದಾರಿ ಹಿಡಿಯಿತು. ಎಚ್ಚರಿಕೆಗೆ ಬಂದ ಮಮ್ಮಾಲಿ ಏನು ಎಣಿಸಿದನೋ? ಅವನು ಎಂದಿನಂತೆ ಗೋವುಗಳೊಂದಿಗೆ ಮನೆಗೆ ತೆರಳಿದನು.
ಈ ಹುಡುಗ ಬೇಳೆಯುತ್ತಾ ಬಂದ ಹಾಗೆ ಕಾರಣಿಕ ಪುರುಷನಾಗಿ ಕಾಣತೊಡಗಿದ. ನಿತ್ಯ ಗೋವುಗಳೊಂದಿಗೆ ಇದ್ದಾಗ ದನಗಳು ದಷ್ಷ ಪುಷ್ಟವಾಗಿ ಬೆಳೆದು ಯಥೇಷ್ಟ ಹಾಲು ಕೊಡಲಾರಂಭಿಸುದವು.ಗದ್ದೆಯ ಹುಣಿಯಲ್ಲಿ ನಡೆದರೆ ಭತ್ತದ ಸಸಿಗಳು ಹುಲುಸಾಗಿ ಬೆಳೆಯುತ್ತಿದ್ದವು. ಯಾವುದಾದರು ಕಾಮಗಾರಿ ಕೆಲಸಕ್ಕೆ ತೊಡಗಿದರೆ, ನಿರಾಂತರವಾಗಿ ಸುಲಭದಲ್ಲಿ ಕೆಲಸ ಕೊನೆಗೊಳ್ಳುತ್ತಿತು. ಇದರಿಂದ ಗುತ್ತಿನ ಮನೆ ಸಂಪತ್ತಿನಿಂದ ತುಂಬಿ ತುಳುಕಾಡಲು ಪ್ರಾರಂಭಿಸಿತು. ಈತನನ್ನು ನೆರೆ ಕರೆಯ ಅನೇಕರು ಕರೆದು ಸಂಪತ್ತು ವೃದ್ಧಿಗಾಗಿ ತಮ್ಮ ಮನೆಯ ಕೆಲಸಗಳನ್ನು ಮೊದಲಾಗಿ ಇವನಿಂದ ಪ್ರಾರಂಭಿಸಿ ಗೆಲವು ಸಾಧಿಸಿಕೊಳ್ಳಲು ಪ್ರಾರಂಭಿಸಿದರು. ಪ್ರತಿಫಲವಾಗಿ ಹಾಲು ಬೆಣ್ಣೆ, ತುಪ್ಪ, ಹಣ್ಣು ಹಂಪಲು ಕೊಟ್ಟು ಬೆಳೆಸಿದರು. ಈಗ ಮಾಮ್ಮಲಿ ದಪ್ಪ ಪುಷ್ಟವಾಗಿ ಬೆಳೆದ ಯುವಕನಾದ. ಊರಿನ ನ್ಯಾಯಗಳನ್ನು ಇಕ್ಕೆಡೆಗೂ ಸಮಾಧಾನವಾಗುವಂತೆ ತೀರಿಸುತ್ತಿದ್ದು, ಊರ ಪರವೂರಿನ ಜನರ ಮೆಚ್ಚುಗೆಗೆ ಪಾತ್ರನಾದ.
ಅದೊಂದು ದಿನ ಪುತ್ತೂರು ಕುರಿಯದ ಗುತ್ತಿನ ಮನೆಯ ಕಪಿಲೆ ದನವನ್ನು ಹುಲಿಯೊಂದು ಹಿಡಿದು ಕೊಂದು ಹಾಕಿತು. ಈ ಸುದ್ದಿ ತಿಳಿದ ಗುತ್ತಿನ ಒಡತಿ ಕುಂಞ ನಮ್ಮ ದನ ಹೋಯಿತಲ್ಲಾ…. ಎಂದು ಪ್ರಲಾಪಿಸಿದಳು. ಮಮ್ಮಾಲಿಗೆ ತನ್ನ ಸಾಕು ತಾಯಿಯ ಮಾತು ಕೇಳಿ ತುಂಬಾ ದುಃಖಿಸಿ, ಕುಳಿತು ಯೋಚಿಸಿಸುತ್ತಿದ್ದವನು, ಒಂದು ನಿಧರ್ಾರಕ್ಕೆ ಬಂದನು. ನಿಧರ್ಾರವನ್ನು ಯಾರಿಗೂ ತಿಳಿಸದೆ ಅವನಷ್ಟಕ್ಕೆ ಇದ್ದನು. ಕತ್ತಲಾಗುತ್ತಾ ಬಂತು. ಮಮ್ಮಾಲಿ ಕರಿಯ ಕಂಬಳಿ ಹೊದ್ದು, ಭಾರೀ ಗಾತ್ರದ ದೊಣ್ಣೆ ಹಿಡಿದು ದನ ಸತ್ತು ಬಿದ್ದು ಕಡೆಗೆ ನಡೆದನು. ಸತ್ತು ಬಿದ್ದಿದ್ದ ದನದ ಮಗ್ಗುಲ್ಲಿ ಮಲಗಿ ಕಂಬಳಿ ಮುಸುಕು ಹಾಕಿಕೊಂಡನು. ಹೆಚ್ಚು ಹೊತ್ತು ಕಳೆದಿರಲಿಲ್ಲಾ. ಹುಲಿ ಘಜರ್ಿಸುತ್ತಾ ಬಂದು-ದನದ ಎದೆ ಗುಂಡಿಗೆಯನ್ನು ಮೊದಲೇ ಸೀಳಿ ಹಾಕಿದ ಭಾಗಕ್ಕೆ ಬಾಯಿ ಹಾಕಿ ಮಾಂಸ ತಿಂದು ರಕ್ತ ಕುಡಿಯತೊಡಗಿತು. ಮಲಗಿದ್ದ ಮಮ್ಮಾಲಿ ಸಮಯ ಸಾಧಿಸಿ ಹುಲಿಯ ಬಾಲ ಹಿಡಿದು ದೊಣ್ಣೆಯಿಂದ ಹೊಡೆಯತೊಡಗಿದನು. ಹುಲಿಯು ಅಕ್ರಮಣಕ್ಕೆ ಮುಂದಾದಾಗ ಮಮ್ಮಾಲಿಯ ಬಲವಾದ ಪೆಟ್ಟು ತಲೆಗೆ ಬಿದ್ದು ಹುಲಿ ಸತ್ತು ಬಿದ್ದಿತು. ಕಾಡಿನಿಂದ ಬೀಳಲು ಹರಿದು ಸತ್ತ ಹುಲಿಯ ಸೊಂಟಕ್ಕೆ ಬಿಗಿದು, ಗುತ್ತಿನ ಮನೆಯ ಅಂಗಳಕ್ಕೆ ಎಳೆದು ಹಾಕಿದನು. ಗುತ್ತಿನ ಒಡತಿ ಕೂಡಿದಂತೆ ಮನೆಯವರೆಲ್ಲಾರೂ ದಿಗಿಲಾದರೂ ಮಮ್ಮಾಲಿಯ ದೈರ್ಯ ಸಾಹಸಕ್ಕೆ ಮೆಚ್ಚಿ ಕೊಂಡಾಡಿದರು. ಈ ಸುದ್ದಿ ಕೇಳಿದ ಊರವರೆಲ್ಲಾ ಬಂದು ಸೇರಿದರು. ಮರುದಿನ ಹುಲಿಯೊಂದಿನ ಮಮ್ಮಾಲಿಯ ಮೆರವಣಿಗೆಯಾಗಿ ಧನಕನಕಾದಿಗಳನ್ನು ಉಡುಗೊರೆಯಾಗಿ ಕೊಟ್ಟು ಗೌರವಿಸಿದರು. ಶರೀರಕ್ಕೆ ಬಲವೆಷ್ಟಿದ್ದರೂ ಗರಡಿ ವಿದ್ಯೆ ಅಗತ್ಯವೆಂದು ತಿಳಿದ ಊರಿನ ಗಣ್ಯರನೇಕರು ಮಮ್ಮಾಲಿಯನ್ನು ಗರಡಿ ಶಾಲೆಗೆ ಸೇರಿಸುವಂತೆ ಗುತ್ತಿನ ಒಡತಿಗೆ ಒತ್ತಾಯ ಮಾಡಿದರು. ಇದಕ್ಕೆ ಒಪ್ಪಿಕೊಂಡ ಗುತ್ತಿಗಾರ್ತಿ ಗರಡಿ ಶಾಲೆಗೆ ಸೇರಿಸಲು ಮುಂದಾದಳು ಆದರೆ ಪುತ್ತೂರಿನಲ್ಲಿ ಸರಿಯಾದ ಶಾಲೆಯಿರಲಿಲ್ಲ. ವಿಟ್ಲದರಸರ ಅನುದಾನದಿಂದ ವಿಟ್ಲದಲ್ಲಿ ಒಂದು ಪ್ರಸಿದ್ಧ ಗರಡಿ ಶಾಲೆಯಿತ್ತು. ಗುತ್ತುಗಾರ್ತಿ ವಿಟ್ಲದರಸರ ಮನ ಒಲಿಸಿ ಮಮ್ಮಾಲಿಗೆ ವಿಟ್ಲದ ಗರಡಿ ಶಾಲೆಗೆ ಸೇರಿಸೀಯೇ ಬಿಟ್ಟಳು.
ಈ ಮಮ್ಮಾಲಿ ಬ್ಯಾರಿಯ ಹಿನ್ನಲೆಯೇನು? ತುಳು ನಾಡಿನಲ್ಲಿ 4-5 ಬುಡಕಟ್ಟಿನ ಮುಸ್ಸಿಮರಿದ್ದಾರೆ. ಅವರಲ್ಲಿ- 1) ಮಹ್ಮದೀಯರು 2) ಮೇನರರು 3) ಮಾಪಿಳ್ಳೆಯವರು 4) ನವಾಯಿತರು 5) ಮುಸಲ್ಮಾನರು (ಪುದಿಯ ಇಸ್ಲಾಂ) ಇವರಲ್ಲಿ ಹೆಚ್ಚಿನವರು ಮಾಪಿಳ್ಳೆಯವರು. ಇವರು ತಳುನಾಡಿನ ದಕ್ಷೀಣ ಭಾಗದಲ್ಲಿ ಹೆಚ್ಚಾಗಿ ವಾಸ ಮಾಡುತ್ತಾರೆ. ಬಂಗರಸರ ಮತ್ತು ಚೌಟ ರಾಣಿಯ ಸೈನ್ಯದಲ್ಲಿ ಸೈನಿಕರಾಗಿಯೂ, ಸೇನಾಧಿಪತಿಗಳಾಗಿಯೂ ಇದ್ದರಂತೆ. ಹಾಗೆಯೇ ಮಾಪಿಳ್ಳೆಯವರು ಅನೇಕ ಒಳ ಅರಸರ, ಬೀಡಿನ ಬಲ್ಲಾಳರ ಆಶ್ರಯ ಪಡೆದು ಸೈನಿಕ ನೆಲೆಯಿಂದ, ವ್ಯಾಪಾರದ ನೆಲೆಯಿಂದ ಜೀವಿಸುತ್ತಿದ್ದರು. ನಮ್ಮ ಈ ಕಥಾ ನಾಯಕ ಮಾಪಿಳ್ಲೆ ಜನಾಂಗಕ್ಕೆ ಸೇರಿದವನೆಂದು ತಿಳಿಯಲಾಗಿದೆ.
ವಿಟ್ಲದಲ್ಲಿ ಗರಡಿ ವಿದ್ಯೆ ಕಲಿತವನು ದೇರಣ್ಣ ಗೌಡನ ಸಹಾಯದಿಂದ ಎಣ್ಮೂರಿಗೆ ಬೀಡಿಗೆ ಸೇರಿದ ಕತೆಯನ್ನು ಮೊದಲೇ ತಿಳಿದಿದ್ದೇವೆ. ಮಮ್ಮಾಲಿ ಎಣ್ಮೂರಿಗೆ ಬಂದಾಗ ಕೋಟಿ ಚೆನ್ನಯರ ಕಾಲ ಕಳೆದು ಒಂದೆರಡು ವರ್ಷಗಳು ಮಾತ್ರ ಕಳೆದಿರಬಹುದು. ಎಣ್ಮೂರು ಬೀಡು ಮಮ್ಮಾಲಿಯ ರಕ್ಷಣೆಯಲ್ಲಿ ಭಯವಿಲ್ಲದೆ ಸಾಗುತ್ತಿತ್ತು. ಎಣ್ಮೂರು ದೇವ ಬಲ್ಲಾಳರಸರು ಬೊಗರಸ ಬೀಡುಗಳಲ್ಲಿ ಅತೀ ಶ್ರೇಷ್ಠರೂ ಆಗಿದ್ದರು. ಪ್ರಜಾ ಪರಿಪಾಲನೆಯಲ್ಲಿ ಬಲ್ಲಾಳರು ಗಮನವಿಟ್ಟು ಆಳುತ್ತಿದ್ದರಿಂದ ಜನಪ್ರಿಯ ಅರಸರೂ ಆಗಿದ್ದರು. ವೀರ ಮಂಜು ಪೆರ್ಗಡೆ, ಕೋಟಿ ಚೆನ್ನಯರಂಥ ಮಹಾ ಯೋಧರನ್ನು ಗಳಿಸಿಗೊಂಡ ದೇವ ಬಲ್ಲಾಳರು ಮಮ್ಮಾಲಿಯಂತಹ ವೀರ ಯೋಧನ್ನು ಪಡೆದುದಕ್ಕೆ ಹೆಮ್ಮೆ ಪಡುತ್ತಿದ್ದರು.
ದೇವ ಬಲ್ಲಾಳರ ಅಂದಿನ ಪಟ್ಟದ ಕತ್ತಿ
ನಾನೆಂದೂ ಕುಳಿತುಕೊಳ್ಳಲಾರೆ ಎಂದು ದೃಢ ನಿಶ್ಚಯದಿಂದ ಹೇಳಿ ಬಿಟ್ಟನು. ಮುಂದೇನು ಮಾಡುವುದೆಂದು ಯೋಚಿಸಿದ ಬಲ್ಲಾಳರು ಪಟ್ಟದ ಮಣೆಯಲ್ಲಿ ಪಟ್ಟದ ಕಿರೀಟ ಇಟ್ಟು ರಾಜ್ಯ ಭಾರ ಮಾಡಿದರು. ತಾಮ್ರದ ತಗಡಿನಲ್ಲಿ ಮರಣ ಶಾಸನ ಬರೆದು ತನ್ನ ಬೀಡು ಮತ್ತು ರಾಜ್ಯ ತನ್ನ ನಂತರ ಮಮ್ಮಾಲಿ ಬ್ಯಾರಿಗೆ ಎಂದು ವ್ಯವಸ್ಥೆ ಮಾಡಿದರು. ಆದರೆ ಸದಾ ದುಃಖಿತರಾದ ಬಲ್ಲಾಳರು ಹೆಚ್ಚು ಸಮಯ ಬದುಕಲಿಲ್ಲ.
ಈಗ ಪುನಃ ರುಕ್ಮ ಬಲ್ಲಾಳ ಅಧಿಕಾರಕ್ಕಾಗಿ ಪ್ರಯತ್ನ ಪಟ್ಟು ವಿಟ್ಲ ಮತ್ತು ಕುಂಬ್ಳೆ ಅರಸರಿಗೆ ದೂರು ಹೇಳಿ ಪಟ್ಟದ ಮಣೆ ದೊರೆಯುವಂತೆ ಪ್ರಯತ್ನಿಸಿದ. ಕುಂಬ್ಲೆ ಮತ್ತು ವಿಟ್ಲದರಸರು ಬಂದು ಮಮ್ಮದೆಯನ್ನು ಕರೆದು ಪಟ್ಟ ರುಕ್ಮ ಬಲ್ಲಾಳನಿಗೆ ಬಿಟ್ಟು ಕೊಡುವಂತೆ ಹೇಳಿದರು. ಅದಕ್ಕೆ ಮಮ್ಮಾಲಿ ಹೇಳಿದ್ದೇನು.? ನಾನು ಪಟ್ಟ ಕಸಿದುಕೊಂಡಿಲ್ಲ. ದೇವ ಬಲ್ಲಾಳರ ಮರಣ ಶಾಸನ ಪ್ರಕಾರ ಪಟ್ಟ ನನಗೆ ಬಂದಿದೆ. ಈ ರುಕ್ಮ ಬಲ್ಲಾಳರ ದುಷ್ಕೃತ್ಯಕ್ಕೆ ನೊಂದು ಅವರು ಮರಣ ಶಾಸನ ಬರೆಸಿದರು. ನಾನೀಗ ಪಟ್ಟ ಬಿಟ್ಟು ಕೊಟ್ಟರೆ ಬಲ್ಲಾಳರಿಗೆ ವಂಚನೆ ಮಾಡಿದಂತಾಗುತ್ತದೆ. ಇದರಿಂದ ಅವರ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಾರದು. ಆದ್ದರಿಂದ ನಾನಾಗಿ ಪಟ್ಟ ಬಿಟ್ಟು ಕೊಡಲಾರೆ.!! ಎಂದು ಮಮ್ಮಾಲಿ ದಿಟ್ಟತನದ ಉತ್ತರ ಕೊಟ್ಟು ಬಿಟ್ಟನು. ರುಕ್ಮ ಬಲ್ಲಾಳನ ಪರವಾಗಿ ವಾದಿಸಲು ಬಂದಿದ್ದ ಅರಸರಿಬ್ಬರೂ ಮಾತು ಬರದವರಾದರು. ಕೊನೆಗೆ ಯೋಚಿಸಿ ಮತ್ತೊಂದು ಉಪಾಯ ಹುಟ್ಟು ಹಾಕಿದರು. ಮಮ್ಮಾಲೀ ನಿನ್ನ ವಾದದ ಮಾತು ಸತ್ಯವಾಗಿದ್ದರೆ. ಸತ್ಯವನ್ನೇ ಪರಿಕ್ಷಿಸೋಣ ಪಟ್ಟದ ಕೀರಿಟದ ಮುಂಡಾಸನ್ನು ಆನೆಗೆ ಕೋಡೋಣ. ಅದು ಯಾರ ತಲೆಗೆ ಮುಂಡಾಸು ಇಡುತ್ತದೋ ಅವನಿಗೆ ಪಟ್ಟ ಕಟ್ಟೋಣ ಅಂದರು.
ಸತ್ಯವೆಂಬ ಮಾತಿಗೆ ಮಮ್ಮಾಲಿ….. ಒಲಿದವನು….. ಈ ಮಾತಿಗೆ ಒಪಿ ಬಿಟ್ಟ. ಇದರಂತೆ ಬಾಕಿಮಾರು ಗದ್ದೆಯಲ್ಲಿ ವ್ಯವಸ್ಥೆಯಾಯಿತು. ಆನೆಗೆ ಕೀರಿಟ ಹೊಂದಿಸಿದ ಮುಂಡಾಸನ್ನು ಕೊಟ್ಟರು. ಪಟ್ಟದ ಸ್ಪಧರ್ಿಗಳಿಬ್ಬರನ್ನು ಗದ್ದೆಯಲ್ಲಿ ನಿಲ್ಲಿಸಲಾಯಿತು. ಆನೆಯು ನೇರವಾಗಿ ಹೋಗಿ ಮಮ್ಮಾಲಿಯ ತಲೆಗೆ ಕೀರಿಟ ತೊಡಿಸಿತು. ಇದರಿಂದ ಮಮ್ಮಾಲಿಗೆ ಪಟ್ಟ ಸ್ಥಿರವಾಯಿತು. ಆದರೆ ಇಲ್ಲಿ ರುಕ್ಮ ಬಲ್ಲಾಳನಿಗೆ ಅರಸರು ಅವಕಾಶವೊಂದನ್ನು ಕಲ್ಪಿಸಿಕೊಟ್ಟರು. ರುಕ್ಮ ಬಲ್ಲಾಳನ ಬೀಡಿಗೆ ಸಂಬಂಧ ಪಟ್ಟ ಪ್ರದೇಶಗಳನ್ನು ರುಕ್ಮ ಬಲ್ಲಾಳನಿಗೇ ಕೊಟ್ಟು ಬಿಡಲಾಯಿತು. ಆದರೆ ಬಂಗರಸರಿಗೆ ಕೊಡುವ ರಾಜ್ಯಕಂದಾಯ ಲೋಪವಿಲ್ಲದೆ ಶರ್ತದೊಂದಿಗೆ ಕೊಡುವ ತೀಮರ್ಾನಕ್ಕೆ ಬಂದರು. ಈ ಒಪ್ಪಂದಕ್ಕೆ ಮಮ್ಮಾಲಿಯು ಒಪ್ಪಿಕೊಂಡನು. ಕೆಲವು ತಿಂಗಳುಗಳು ಉರುಳಿದವು. ರುಕ್ಮ ಬಲ್ಲಾಳನಿಗೆ ಮಾತ್ರ ಪೂರ್ಣ ಪ್ರಮಾಣದ ಅಧಿಕಾರ ದೊರೆಯಿದ್ದರಿಂದ ಚಿಂತೆಗೀಡಾದನು. ಈ ಊರಿನಲ್ಲಿ ನಿಲ್ಲಲಾರೆನೆಂದು ನಿಶ್ಚಯಿಸಿಕೊಂಡು ಬೇರೆ ಉಪಾಯಕ್ಕೆ ಯೋಚಿಸುತ್ತಿದ್ದನು.
ಮಮ್ಮಾಲಿಗೆ ದೇವ ಬಲ್ಲಾಳರು ಶಾಸನದಲ್ಲಿ ಬರೆದಿಟ್ಟ ಪ್ರಮುಖ್ಯ ವಿಷಯಗಳು ಹೀಗಿದ್ದವು. ವಿಷ್ಣು ದೇವರ ಜಾತ್ರೆ, ಪ್ರತಿ ವರ್ಷ ಕೊರತೆಯಿಲ್ಲದೆ ನಡೆಯುವುದು. ದೇವಾಲಯವನ್ನು ಒಪ್ಪವಾಗಿ ಇಟ್ಟುಕೊಳ್ಳುವುದು. ನಾಗ ಬನದ ಮೂತರ್ಿಗಳಿಗೆ ಹಾಲು ಹೊಯ್ಯುವುದು, ಬಾಕಿಮಾರು ಗದ್ದಗೆ ಬಾಳೆ ಹಾಕಿಸುವುದು ಇತ್ಯಾದಿ ಈ ಬೀಡಿನ ಪ್ರಾಮುಖ್ಯ ಕ್ರಿಯೆಗಳನ್ನು ನಡೆಸುವುದಲ್ಲದೆ, ಮಾಗಣೆಗೆ ಸೇರಿದ ಆಮೈ, ಕೇರ್ಪಟ, ಅಲೇಂಗಾರ ಮತ್ತು ಎಣ್ಣೂರು ಗ್ರಾಮಕ್ಕೆ ಸೇರಿದ ಬುಟ್ಟಿ ಕೆಲಸಗಳನ್ನು ಮಾಡಿಸುವುದಲ್ಲದೆ ವಂತಿಗೆ ಸಲ್ಲಿಸುವುದು.
ಟಿಪ್ಪಣಿ: ಬೀಡಿನಲ್ಲಿ ಬರೆದಿಟ್ಟ ಶಾಸನವು ಕ್ರಿ.ಶ. ಸುಮಾರು 1925ರ ಅಂದಾಜಿಗೆ ಬೀಡಿಗೆ ಬಿದ್ದ ಬೆಂಕಿಗೆ ಬಲಿಯಾಯಿತು. ಕಥೆೆಯನ್ನು ಹೇಳುತ್ತಿದ್ದ ಆಕ್ರಿಕಟ್ಟೆ ಹುಕ್ರಪ್ಪ ಗೌಡರು ಶಾಸನವನ್ನು ಓದಿದರಂತೆ. ಸುಮಾರು ಕ್ರಿ.ಶ. 1595ರಲ್ಲಿ ಬೀಡಿನ ಅಧಿಕಾರಕ್ಕೆ ಬಂದ ಮಮ್ಮಾಲಿಯ ವಂಶ ಈಗಲೂ ಇದೆ. ಈ ವಂಶದ ಜನರು ಜಿಲ್ಲೆಯಾದ್ಯಂತ ಇರುವರೆಂದು ಈ ಮನೆಯವರಿಂದ ತಿಳಿದು ಬರುವುದು. ಮಹಾವಿಷ್ಣು ದೇಗುಲದ ಮೂತರ್ಿ ಕಾರಾಣಾಂತರದಿಂದ ಚೊಕ್ಕಾಡಿಗೆ ಹೋದರೂ ಬೀಡಿನಿಂದ ಕೆಲವು ಪದ್ದತಿಗಳು ಈಗಲೂ ನಡೆಯುತ್ತದೆ. ಗದ್ದೆಗೆ ಬಾಳೆ ಹಾಕುವುದು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವದಲ್ಲಿ ಪದ್ದತಿಯಂತೆ ಗೌರವ ಪಡೆಯುವುದು ಈಗಲೂ ಕಂಡು ಬರುತ್ತದೆ.
ಇತ್ತೀಚೆಗಿನ ಕೆಲವು ವರ್ಷಗಳ ಹಿಂದೆ ಐವತ್ತೊಕ್ಲು ಗ್ರಾಮದ ಕಂಬಳ ಚಂದ್ರಪ್ರಕಾಶರು ಈ ದೇವಸ್ಥಾನ ಪ್ರದೇಶವನ್ನು ಕ್ರಯಕ್ಕೆ ಪಡೆದುಕೊಂಡು ಹೊಲಗಳ ಬದಿಯ ಕಾಡು ಬಲ್ಲೆಗಳನ್ನು ಕಡಿದಾಗ ಮಹಾವಿಷ್ಣು ದೇವಸ್ಥಾನದ ಕುರುಹು ಕಂಡಿತು. ಇದೇ ವೇಳೆ ಕಟ್ಟ ಬೀಡಿನ ಶ್ರೀ ಲಕ್ಷ್ಮೀನಾರಾಯಣ ರೈಗಳವರು ಇಲ್ಲಿಗೆ ಬಂದು ನೋಡಿದರು. ಕೋಟಿ ಚೆನ್ನಯರು ಆರಾಧಿಸುತ್ತಿದ್ದ ಈ ದೇವಾಸ್ಥಾನವನ್ನು ಜೀಣರ್ೊದ್ಧಾರ ಮಾಡಬೇಕೆಂದು ಸಂಕಲ್ಪ ಮಾಡಿ ಕಂಬಳ ಚಂದ್ರಪ್ರಕಾಶರೊಂದಿಗೆ ಸೇರಿ ಊರಿನವರನ್ನು ಕರೆದು ಸಭೆ ಏರ್ಪಡಿಸಿ ಮಹಾವಿಷ್ಣು ದೇಗುಲ ಜೀಣರ್ೊದ್ಧಾರ ಮಾಡುವುದಾಗಿ ನಿರ್ಣಯಕ್ಕೆ ಬಂದರು. ಅದರಂತೆ ಈಗ ಮಹಾವಿಷ್ಣು ದೇಗುಲ ಜೀಣರ್ೊದ್ಧಾರದ ಕೆಲಸಗಳು ಭರದಿಂದ ಸಾಗುತ್ತದೆ.
ಈ ವೈಷ್ಣವ ದೇಗುಲ ಈಗಿನ ಗ್ರಾಮಗಳಾದ ಎಣ್ಮೂರು, ಮುರುಳ್ಯ, ಕಲ್ಮಡ್ಕ, ಪಂಬೆತ್ತಾಡಿ, ಐವತ್ತೊಕ್ಲು, ಕೂತುಕುಂಜ, ಎಡಮಂಗಲ ಮುಂತಾದ ಗ್ರಾಮಗಳ ಕೇಂದ್ರದಲ್ಲಿದ್ದು, ಮಹಾವಿಷ್ಣುವಿನಿಂದ ನಮ್ಮ ದುರಿತ ದುವಾರಿಗಳನ್ನು ಪರಿಹರಿಸುವುದಕ್ಕೆ ಈ ದೇವಸ್ಥಾನ ಜೀಣರ್ೋದ್ಧಾರವಾಗಲೇ ಬೇಕಾಗಿದೆ. ಬಹು ಹಿಂದಿನ ಕಾಲದಲ್ಲಿಯೂ ಈ ದೇಗುಲಕ್ಕೆ ಊರ, ಪರವೂರಿನ ಭಕ್ತ ಜನರು ಬಂದು ಶ್ರೀ ದೇವರ ಅನುಗ್ರಹ ಪಡೆದು ಹೋಗುತ್ತಿದ್ದರೆಂದು ತಿಳಿದು ಬರುವುದು.
ಪ್ರಮಾಣ ಚಾವಡಿ : ಬೀಡಿನಲ್ಲಿ ತಪ್ಪನ್ನು ಒಪ್ಪಿಕೊಳ್ಳದವನನ್ನು ಪ್ರಮಾಣ ಮಾಡಿಸುವ ಪದ್ದತಿಯಿತ್ತು. ಇಲ್ಲಿ ತಪ್ಪು ಮಾಡಿ ತಪ್ಪು ಮಾಡಿಲ್ಲವೆಂದು ಪ್ರಮಾಣ ಮಾಡಿದ್ದಲ್ಲಿ ವಾರ ಕಳೆಯುವ ಮೊದಲಾಗಿಯೇ ಪ್ರಮಾಣ ಮಾಡಿದವನಿಗೆ ಕಷ್ಟ ಕೇಡು ಕಟ್ಟಿಟ್ಟ ಬುತ್ತಿ. ಈ ಅನಾಹುತವಾಗ ಬಾರದೆಂದು ಪ್ರಮಾಣ ಮಾಡುವುದನ್ನು ಆದಷ್ಟೂ ಕಡಿಮೆ ಮಾಡಿದರು. ಇಲ್ಲಿ ಪ್ರಮಾಣ ಮಾಡಿದರೆ ಇದಕ್ಕೆ ಪರಿಹಾರವಿಲ್ಲ. ನ್ಯಾಯಗಳೂ ತೀರಿಸಲ್ಪಡುತ್ತಿದ್ದಾಗ ಬೀಡಿನ ಮುಖ್ಯಸ್ಥರು ನಾನು ಕೊಡುವ ತೀಮರ್ಾನವಲ್ಲ. ಇದು ದೇವಣಾಜಿ ತೀಮರ್ಾನ ಎಂದು ಮೂರು ಸತರ್ಿ ಹೇಳಿ, ದೇವ ಬಲ್ಲಾಳರ ನ್ಯಾಯ ಕಟ್ಟೆಯಿದ್ದ ಸ್ಥಳವನ್ನು ತೋರಿಸುತ್ತಿದ್ದರು.
ದೇವ ಬಲ್ಲಾಳರು ಪಟ್ಟದ ಕೀರಿಟ ಅಪಹರಣವಾದ ಮೇಲೆ ಅದನ್ನು ಧರಿಸುತ್ತಿದ್ದಿಲ್ಲ. ಪಟ್ಟದ ಮಣೇಯಲ್ಲಿಯೇ ಇರುತ್ತಿತ್ತು. ಈ ಪಟ್ಟದ ಕೀರಿಟದ ಬಳಿ ನಿತ್ಯ ನಾಗರ ಹಾವು ವಾಸ ಮಾಡಿಕೊಂಡು ಇತ್ತಂತೆ. ಮಮ್ಮಾಲಿ ಬ್ಯಾರಿ ಅಧಿಕಾರಕ್ಕೆ ಬಂದ ಮೇಲೆಯೂ ಈ ಪಟ್ಟದ ಕೀರಿಟವನ್ನೂ ಮುಟ್ಟುತಿರಲಿಲ್ಲವಂತೆ!
ಮಮ್ಮಾಲಿಯ ವಂಶಜರು ವಾಸಕ್ಕೆ ಬೇರೆಯೇ ಮನೆ ಕಟ್ಟಿಸಿಕೊಂಡು ಬಾಳುತ್ತಿದ್ದರು. ಹೀಗೆ ಕಾಲ ಕಳೆಯುತ್ತಿರಲು ಅರಮನೆಯು ಬಿದ್ದು ಹೋಗಲು ಪಟ್ಟದ ಕಿರೀಟ ಮಣ್ಣಿನಡಿಯಲ್ಲಿ ಸೇರಿ ಹೋಯಿತೆಂದು ಹಲವರು ಹೇಳುತ್ತಾ ಬಂದಿದ್ದಾರೆ. ಇದೇ ಸ್ಥಳವನ್ನು ತೋರಿಸಿ ನ್ಯಾಯ, ತೀಮರ್ಾನ ಪ್ರಮಾಣ ಆಗುತ್ತಿತ್ತು. ಈಗಲೂ ಈ ಮನೆಗೆ ನ್ಯಾಯಕ್ಕಾಗಿ ಜನರು ಬರುವುದಿದೆ. ಪ್ರಮಾಣ ಮಾತ್ರ ಸಂಪೂರ್ಣ ನಿಲ್ಲಿಸಿ ಬಿಟ್ಟಿದ್ದಾರೆ.
********************
ಆಧಾರ:- ಡಿ.ಜಿ.ನಡ್ಕರವರ ಕೋಟಿ ಚೆನ್ನಯ ಪುಸ್ತಕದಿಂದ