ಕೋಟಿ – ಅಯ್ಯಾ ನಾವು ಬಲ್ಲಾಳರ ಭೇಟಿ ನಿರೀಕ್ಷಿಸಿ ಬಹಳ ಸಮಯವಾಯಿತು. ಹೆರವರ ಮನೆಯಲ್ಲಿ ಇದ್ದೇವೆ. ಇನ್ನಾದರೂ ಕಾಣುವುದಕ್ಕೆ ಸಮಯ ಕೊಡಿ.
ಚೆಂದುಗಿಡಿ – ಸಮಯ ಕೂಡಿ ಬಂದಿದೆ. ಬಲ್ಲಾಳರನ್ನು ಕಂಡು ಮಾತಾಡಿದ್ದೇನೆ. ನಿಮ್ಮನ್ನು ಕರಕೊಂಡು ಬರುವರೇ ಹೇಳಿದ್ದಾರೆ.
ಚೆನ್ನಯ – ಯಾವಾಗ ಹೇಳಿಬಿಡು
ಚೆಂದುಗಿಡಿ – ನಾಳೆ ಸಂಕ್ರಾಂತಿ. ನಾಳೆ ಬೇಡ ನಾಡಿದ್ದು ಸೋಮವಾರ, ಅಂದೇ ಬನ್ನಿ.
ಕೋಟಿ – ಎಲ್ಲಿಗೆ ಬರಬೇಕು
ಚೆಂದುಗಿಡಿ – ಪಂಜದ ಕಮಿಲಕ್ಕೆ ಬನ್ನೀರಿ. ಅಲ್ಲೆ ನನ್ನ ಮನೆ. ಅಲ್ಲಿಂದ ಒಟ್ಟಿಗೆ ಹೋಗೋಣ.
ಚೆನ್ನಯ – ಆಗಬಹುದು. ನಿಮ್ಮ ಮನೆಗೆ ಬರುತ್ತೇವೆ.
ಇಷ್ಟು ಮಾತುಕತೆಯಾಡಿದಮೇಲೆ ಕೋಟಿ ಚೆನ್ನಯರು ಕಲ್ಲೆಂಬಿ ದೋಳಕ್ಕೆ ಹೋದರು. ದಿನ ನಿಶ್ಚಯವಾದ ದಿನ ಉಡುಗೆ ತೊಡುಗೆ ಭರ್ಜರಿಯಿಂದ ಧರಿಸಿ ಕೊಂಡವರು ಸುರಿಯಗಳನ್ನು ಹಿಡಿದು ಚೆಂದುಗಿಡಿಯ ಮನೆಗೆ ಹೊರಟರು. ನೇರಹಾದಿ ಕೆಮ್ಮಲೆ ಕಾಡು ಹತ್ತಿ ಹೋಗಲಿತ್ತು. ಹಾಗೆಯೇ ಅದೇ ದಾರಿಯಿಂದ ಕೆಮ್ಮಲೆ ಕಾಡುಹತ್ತಿ ಕಾಡಿನ ನೆತ್ತಿಯಲ್ಲಿ ನೆತ್ತಿಯಲ್ಲಿ ಕುಳಿತು ವೀಳ್ಯ ಹಾಕಿದರು. ವೀಳ್ಯ ಹಾಕಿದವರು ಅಲ್ಲಿಯೇ ಇದ್ದ ಪಾದೆಕಲ್ಲಿಗೆ ಉಗುಳಿದರು. ಆ ಕಲ್ಲಿಗೆ ಉಗುಳಿದ ಎಂಜಲು ನೀರು ಕಾರಣಿಕವಾಗಿ ಕಲ್ಲಿನಲ್ಲಿ ಉಳಿದುಕೊಂಡಿದೆ. (ನಾನು ಹತ್ತು ವರ್ಷಗಳಹಿಂದೆ ನೋಡಿದ್ದೇನೆ. ಪಾದೆಯಲ್ಲಿ ಎಂಜಲು ನೀರು ಕೆಂಪಾಗಿ ಕಂಡುಬರುತ್ತಿತ್ತು. ಇತ್ತೀಚೆಗೆ ಅದೇ ಕಲ್ಲನ್ನು ಇನ್ನೊಮ್ಮೆ ನೋಡಿ ಪರೀಕ್ಷಿಸಲು ಹೋದಾಗ ಆ ಪ್ರದೇಶದಲ್ಲಿ ದಟ್ಟವಾದ ಬಿದಿರು ಹಿಂಡಿಲುಗಳು ಬೆಳೆದು ಆ ಕಲ್ಲೇ ಕಾಣಿಸಲಿಲ್ಲ.) ಅಲ್ಲಿಂದ ಕಾಡುಇಳಿಯುವಾಗ ಸಣ್ಣ ಸಣ್ಣ ಕಲ್ಲುಗಳಿಂದ ಪ್ರಾರಂಭವಾದದ್ದು ದೊಡ್ಡ ದೊಡ್ಡ ಕಲ್ಲುಗಳ ಸಮೂಹವೇ ಕಾಣಿಸಿತು. ಇದನ್ನು ಕೋಟಿ – ಕಿನ್ನಿ ಕಲ್ಲದಾರಿ ಆನೆಕಲ್ಲು ವರ್ಧ ಅಂದನಂತೆ. ಕಾಡು ಇಳಿದವರು ಬೈಲುದಾಟಿ ಕಮಿಲಕ್ಕೆ ಬಂದು ಚೆಂದುಗಿಡಿಯ ಮನೆಗೆ ಹೋದರು. ಚೆಂದುಗಿಡಿ ಕಾದೇ ಇದ್ದ. ಒಟ್ಟಿಗೆ ಬಲ್ಲಾಳನ ಬೀಡಿಗೆ ಹೊರಟರು. ಚೆಂದುಗಿಡಿ ನೇರಹಾದಿಯನ್ನು ಬಿಟ್ಟು ಬಳಸು ದಾರಿಯುಂದ ಹೋಗಿ ಕುದ್ವಕ್ಕೆ ಮುಟ್ಟಿದರು. ಆ ದಾರಿಯ ಬದಿಯಲ್ಲಿ ಕುದ್ವದ ಯುವಕರು ನೆಪದ ಕೆಲಸ ಮಾಡುತ್ತಿದ್ದರು. ಕೊಟಿ ಚೆನ್ನಯರಿಗೂ ಇವರಿಗೂ ಮಾತು ಬೆಳೆಯಿತು. ಮುಂದೆ ಜೋರಾಯಿತು.
ಒಮ್ಮೆಲೆ ಹತ್ತಾರು ಮಂದಿ ಚೆನ್ನಯನ ಮೇಲೆ ಏರಿ ಬಂದರು. ಚೆನ್ನಯ ಔಡು ಕಚ್ಚಿ ಕಾಲಲ್ಲಿ ಒದ್ದ, ಕೈಯಲ್ಲಿ ಬಡಿದ. ಎಲ್ಲಾರು ಒದೆ ತಿಂದದ್ದೆ ತಿಂದದ್ದು. ಮಿಂಚಿನಂತೆ ಬಂದವರು ಕ್ಷಣದಲ್ಲಿ ಓಡಿದರು. ಚೆಂದುಗಿಡಿ-ಅಯ್ಯೋ ಬೇಡ ಬೇಡ ಎಂದು ಬೊಬ್ಬೆ ಹೊಡೆದ. ಆದರೆ ಇದೆಲ್ಲವೂ ಕಣ್ಣು ಕಟ್ಟು, ಮೊದಲೆ ಚೆಂದುಗಿಡಿ ಚೆನ್ನಯನಿಗೆ ಸಮಾಧಾನ ಹೇಳಿ. ಕುದ್ವದವರಿಗೆ ಬೇಕಾದಷ್ಟು ಬೈದು ಕೋಟಿ ಚೆನ್ನಯರನ್ನು ಒಪ್ಪಿಸಿ ಬೀಡಿಗೆ ಕರೆದುಕೊಂಡು ಹೋದನು.
ಪಂಜ ಬೀಡಿನ ಪಕ್ಕದಲ್ಲಿ ಪೂರ್ವ ತಯಾರಿಯಂತೆ ಬಂಧಿಖಾನೆ (ಗುಗ್ಗುರುಮಾಳ್ಯ) ನಿಮರ್ಿಸಲಾಗಿತ್ತು. ಚೆಂದುಗಿಡಿ ಬಂಧಿಖಾನೆಯ ಹತ್ತಿರ ಕರೆದು ಕೊಂಡು ಬಂದವನು ಕೋಟಿ ಚೆನ್ನಯರ ಕಡೆ ಮುಖ ಮಾಡಿ ಬಂಧಿಖಾನೆಯ ಕುರಿತು ವಿವರಿಸಲು ಪ್ರಾರಂಬಿಸಿದ. ಅರಸರಿಗೆ ಆರಾಮವಾಗಿರಲು ಕಟ್ಟಿಸಿದ್ದ ಹೊಸ ಅರಮನೆ. ಅವರು ಹೆಚ್ಚಾಗಿ ಇಲ್ಲಿಯೇ ಇರುತ್ತಾರೆ. ನಾನು ಒಳಗೆ ಹೋಗಿ ನೋಡಿ ಬರುತ್ತೇನೆ. ಈಗ ಬೇಟಿಯಾಗಬಹುದೆ ಎಂದು ಕೇಳಿ ಬರುತ್ತೇನೆ, ಎಂದವನು ಬಾಗಿಲನ್ನು ದೂಡಿ ಒಳ ಪ್ರವೇಶಿಸಿದ. ಕೋಟಿ ಚೆನ್ನಯರು ಒಬ್ಬರನೊಬ್ಬರ ಮುಖ ನೋಡಿಕೊಂಡರು ಆ ಹೊತ್ತಿಗೆ ಒಳ ಹೋದ ಚೆಂದುಗಿಡಿ ಬಂದವನು ಸಣ್ಣ ಸ್ವರದಲ್ಲಿ ಮಾತಾಡಿದ. ರಾಜರು ಇದ್ದಾರೆ ನಿಮ್ಮನ್ನು ಮಾತ್ರ ಒಳಗೆ ಬರಲು ಹೇಳಿದ್ದಾರೆ. ನಮ್ಮಲ್ಲಿ ಗುಟ್ಟೇನು ನೀನು ಬಾ ಅಂದಾಗ ಅರಸರು ಹೇಳಿದಷ್ಟೆ ಮಾಡಬೇಕಾದವನು ನಾನು, ಹೆಚ್ಚಿಗೆ ಮಾಡಿದರೆ ಕೋಪಿಸಿಕೊಳ್ಳುವರು. ನಿಮ್ಮಲ್ಲಿ ಮಾತಾಡಿಸುವ ವೇಳೆಗೆ ಕರೆಸಿಕೊಳ್ಳಬಹುದು. ಅವರ ಕ್ರಮವೇ ಹಾಗೆ. ಈಗ ನೀವು ಹೋಗಿ. ಕರೆದಾಕ್ಷಣ ಬಂದು ಬೀಡುತ್ತೇನೆ ಎಂದು ಹೇಳಿದ. ಕೋಟಿ ಚೆನ್ನಯರಿಬ್ಬರೂ ಒಳಗೆ ನಡೆದರು. ಒಳಗೆ ಬೀಡಿನ ಕೊಠಾರಿಗೆ ಬಲ್ಲಾಳರ ವೇಷ ಧರಿಸಿ ಕುಳ್ಳಿರಿಸಿಲಾಗಿತ್ತು. ಆತ ಬನ್ನಿ ಬನ್ನಿ ಅಂದನು ಬಲಕ್ಕೆ ತಿರುಗಿ ಹೊರಗಿನ ಬಾಗಿಲಿನಿಂದ ನಸುಳಿ ಬಾಗಿಲು ಜಡಿಯಲಾಯಿತು. ಅಂತೆಯೇ ಎದುರಿನ ಬಾಗಿಲನ್ನು ಚೆಂದುಗಿಡಿಯೇ ಭದ್ರಪಡಿಸಿ ಕೋಟಿ ಚೆನ್ನಯರನ್ನು ಬಂದಿಸುವಲ್ಲಿ ಯಶಸ್ವಿಯಾದನು. ಬಲೆಯಲ್ಲಿ ಬಿದ್ದ ಕೋಟಿ ಚೆನ್ನಯರು ಹೌಹಾರಿ ಆನೆಯಂತೆ ಫೀಳಿಟ್ಟರು, ಚಿಂತಿಸಿದರು, ಹೂಂಕರಿಸಿದರು, ರೊಷದಲ್ಲಿ ಕುದಿದು ಕುಪ್ಪಳಿಸಿದರು. ಆದರೇನು, ಇರುವುದು ಬಂದಿಖಾನೆಯಲ್ಲಿ. ಮುಂದಿನ ಗತಿ? ಒದಗಬಹುದಾದ ಕಷ್ಟಕ್ಕೆ ಪರಿತಪಿಸಿದರು. ಅನ್ನ ಆಹಾರ ಕೊಡದೆ ಕೆಡಿಸುವ ತಂತ್ರವೆಂದು ಭಾವಿಸಿದರು. ಹೊರಗಿನಿಂದ ಮಾತು ಕೇಳಲು ಪ್ರಾರಂಭವಾಯಿತು. ಚೆಂದುಗಿಡಿಯ ಸ್ವರ ಗಟ್ಟಿಯಾಗಿ ಕೇಳಿಸಿತು. ಪಡುಮಲೆಯ ಕೊಲೆಪಾತಿಕಿಗಳೇ, ನಿಮ್ಮ ಅಂತ್ಯ ಪಂಜದಲ್ಲಿ, ಪಡುಮಲೆಯಲ್ಲಿ ಮಾಡಬಾರದನ್ನು ಆಡಬಾರದನ್ನು ಮಾಡಿದ್ದೀರಿ. ಅನ್ನ ನೀರಿಲ್ಲದೆ ಬಳಲಿ ಬಳಲಿ ಸಾಯಿರಿ. ಅಣ್ಣ ತಮ್ಮಂದಿರಿಬ್ಭರೂ ಮಾತು ಕೇಳಿಸಿ ಕೊಂಡರು. ಇದೆಲ್ಲವೂ ಚೆಂದುಗಿಡಿಯ ತಂತ್ರವೇ…. ಎಂದು ತಿಳಿದರು. ಆದರೆ ಮಾಡುವುದೇನು.
ಚೆಂದುಗಿಡಿ ಕೋಟಿ ಚೆನ್ನಯರ ಶಕ್ತಿ ಸಾಮಥ್ರ್ಯಕ್ಕೆ ಬಹಳ ಅಂಜಿದ್ದನು. ಇವರನ್ನು ಉಪಾಯದಿಂದ ಸೋಲಿಸಬೇಕಲ್ಲದೆ ಶಕ್ತಿ ಸಾಮಥ್ಯದಿಂದ ಸೋಲಿಸಲಾಗದೆಂದು ತಿಳಿದೆ ಸಂಚು ಮಾಡಿ ಗೆಲುವಿನ ಹಾದಿ ಹಿಡಿದ.
ಒಳಗಿದ್ದ ಕೋಟಿ ಚೆನ್ನಯರು ಕುಳಿತರು. ಎದ್ದರು. ತಮ್ಮ ದುವರ್ಿಧಿಗೆ ಪರಿಪರಿಯಾಗಿ ಶಪಿದರು. ಕ್ಷಣ ಹೊತ್ತು…. ಯುಗವಾಗಿ ಕಂಡಿತು. ಆದರೂ ಕತ್ತಲಾಯಿತು. ಚಂದ್ರ ಮೋಡಗಳೆಡೆಯಿಂದ ಮೇಲೇರುತ್ತಿದ್ದ. ಆದರೂ ಕೋಣೆಯಿಡೀ ಬರಿ ಕತ್ತಲು. ಬಳಲಿ ಸುಸ್ತಾದ ಬಂಟರು ತಂದೆ ತಾಯಿ ಎಲ್ಲರನ್ನೂ ನೆನೆಪಿಸಿ ಕೊಂಡರು. ನಾಗಬ್ರಹ್ಮ ಕುಲದೇವರು. ನಮ್ಮನ್ನು ನಾಗಬ್ರಹ್ಮನೇ ರಕ್ಷಿಸಬೇಕೇಂದು ತಿಳಿದು ಕೊಂಡರು, ಇಬ್ಬರೂ ಜೊತೆಯಾಗಿ ಪ್ರಾಥರ್ಿಸಿದರು. ನಡು ಇರುಳು ಕಳೆಯಿತು. ಚಂದ್ರ ಪಡುದಿಕ್ಕಿಗೆ ತಲುಪಿದಾಗ ಮಾಳಿಗೆಯ ಒಂದು ಸಣ್ಣ ಕಿಟಕಿಯೊಳಗಿಂದ ಚಂದ್ರ ಇಣುಕಿ ನೋಡಿದ. ಚೆನ್ನಯ ಕಿಟಕಿಯನ್ನು ನೋಡಿ ಅಣ್ಣ…. ನನ್ನನು ಒಂದು ನಿಮಿಷ ಹೆಗಲ ಮೇಲೆ ಹೊತ್ತು ಕೊಂಡರೆ ನಾವು ಇಲ್ಲಿಂದ ತಪ್ಪಿಸಿ ಕೊಳ್ಳಬಹುದು ಎಂದನು.
ಕೋಟಿಯು ಮೊಣಕಾಲೂರಿ ತಮ್ಮನನ್ನು ಹೆಗಲ ಮೇಲೆ ಹತ್ತಿಸಿ ಎಂದು ನಿಂತನು. ಚೆನ್ನಯನ ಕೈಗಲಿಗೆ ಆ ಚಿಕ್ಕ ಕಿಟಕಿಯು ಎಟುಕಿತು. ಕೂಡಲೆ ಅದನ್ನು ಬಲವಾಗಿ ನೂಕಿ ಅಲಗಿಸಿದನು. ಕಿಟಕಿಯು ಚೆನ್ನಯನ ಬಲಕ್ಕೆ ಮಣಿಯಿತು. ಕಿಟಕಿಯ ಚೌಕಟ್ಟೆ ಹೊರಬಂತು ಚೆನ್ನಯನು ಸದ್ದಿಲ್ಲದೆ ಮಾಳ್ಯದ ಒಳಗೆ ಇಳಿಸಲು ಕೋಟಿ ಸಹಕರಿಸಿದನು. ಕಿಟಕಿ ಇದ್ದಡೆ ಗೋಡೆ ಸಾಕಷ್ಟು ದೊಡ್ಡ ಕಿಂಡಿಯಾಗಿತ್ತು. ಅನಂತರ ಬಂಟರು ತಮ್ಮ ನಡುವಿಗೆ ಬಿಗಿದು ಕೊಂಡ ದಟ್ಟಗಳನ್ನು ಜೋಡಿಸಿದರು. ಕೋಟಿಯ ದಟ್ಟಿಯ ಒಂದು ಭಾಗವನ್ನು ಎಳೆದು ಹಿಡಿದು ಕೊಂಡನು. ಚೆನ್ನಯ ಕಿಂಡಿಯಿಂದ ನುಸುಳಿ ಗೋಡೆಗೆ ಕಾಲು ಕೊಟ್ಟು ಇಳಿದನು. ಮುಂದೆ ಚೆನ್ನಯನು ದಟ್ಟಿಯನ್ನು ಬಲವಾಗಿ ಹಿಡಿದು ಕೊಂಡಾಗ ಕೋಟಿ ದಟ್ಟಿ ಹಿಡಿದು ಗೋಡೆಗೆ ಕಾಲು ಕೊಟ್ಟು ಕಿಂಡಿಗೆ ಬಂದನು. ದಟ್ಟಿಯನ್ನು ಮಾಡಿನ ಮರದ ಅಡ್ಡಕ್ಕೆ ಕಟ್ಟಿ, ದಟ್ಟಿಯನ್ನು ಇಳಿಬಿಟ್ಟು ಅದರ ಆಧಾರದಿಂದ ಇಳಿದು ತಮ್ಮನನ್ನು ಸೇರಿಕೊಂಡನು. ಇಷ್ಟರಲ್ಲಿ ಚಂದ್ರನು ಮುಳುಗಿ ಏನೂ ಕಾಣಿಸುತ್ತಿರಲಿಲ್ಲ. ಆ ಹೊತ್ತಿಗೆ ಮೂಢಣದಿಂದ ಭಾರಿ ನಕ್ಷತ್ರವೊಂದು ಮೂಡಿ ಬಂತು ದಾರಿಯು ಅಸ್ವಷ್ಟತೆಯಿಂದ ಕಾಣಿಸಿತು. ಮೆಲ್ಲಮೆಲ್ಲನೆ ಹೆಜ್ಜೆ ಹಾಕಿ ಬೈಲಿಗಿಳಿದು ಕಟ್ಟ ಹುಣಿಯಿಂದ ಸಾಗಿ ಅರಮನೆಯ ಉತ್ತರಕಿರುವ ಕಾಡಿಗೆ ನುಸುಳಿದರು.