ಗುತ್ತು ಮತ್ತು ಐತಿಹಾಸಿಕ ಮನೆಗಳಲ್ಲಿ ಒಂದಾದ ಕಲ್ಯಾ ಕೈರೊಟ್ಟು ದೊಡ್ಡ ಮನೆ (ನೇಲ್ಯ ಇಲ್ಲ್) ಬೋಂಟ್ರ ಮನೆ

ಕಾರ್ಕಳ ಕಲ್ಯಾ ಕೈರೊಟ್ಟು ಬೋಂಟ್ರ ಮನೆತನದ ಇತಿಹಾಸ ಪ್ರಾಚೀನ ವೈಭವ ಕುತೂಹಲಕಾರಿ. ಈ ಮನೆತನಕ್ಕೆ ಹೇಳುವ 600 ವರ್ಷಗಳ ಇತಿಹಾಸ ವಿಜಯನಗರದ ತುಳು ವಂಶದ ಕಾಲಘಟ್ಟವನ್ನು ಸೂಚಿಸುತ್ತದೆ. ‘ಬೋಂಟ್ರ’ ಎಂಬುದು ಬಿಲ್ಲವರ ಉಪನಾಮಗಳಲ್ಲಿ ಒಂದು. ಈ ಉಪನಾಮ ಇರುವ ಬಿಲ್ಲವ ಮನೆತನಗಳು ಕಾರ್ಕಳದ ಕೆಲವೆಡೆಗಲಲ್ಲಿ ಇರುವಂತೆ ಬೆಳ್ತಂಗಡಿ ತಾಲೂಕಿನಲ್ಲೂ ಪ್ರಾಚೀನ ಗುತ್ತು ಬರ್ಕೆ ಮನೆಗಳಿವೆ.

ಅಪಾರ ಭೂಮಿ ಹೊಂದಿದ ಬೇಸಾಯಗಾರ ಮನೆತನಗಳಿವು. ಬೋಂಟ್ರರು ವರ್ಗಭೂಮಿ ಉಳ್ಳ ಭೂಮಾಲಿಕ ಕೃಷಿಕರೆನ್ನುತ್ತಾರೆ ಶೀನಪ್ಪ ಹೆಗ್ಗಡೆ ಮತ್ತು ಎಸ್. ಎನ್. ಕಲ್ಯಾರವರು. ‘ಬೋಂಟೆ’ ಎನ್ನುವ ತುಳುವಿನ ಶಬ್ಧದಿಂದ ಬೋಂಟ್ರರಾಗಿರಬೇಕೆಂಬುದು ಕೆಲವರ ಅಭಿಪ್ರಾಯ. ಬೋಂಟ್ರ ಮನೆತನಕ್ಕೆ ಸಾವಿರಾರು ಎಕ್ರೆ ವರ್ಗಭೂಮಿ ಇದ್ದು ನೂರಾರು ಒಕ್ಕಲುಗಳು, ಕೃಷಿಕ ಕಾರ್ಮಿಕರು ಇದ್ದ ಕಾರಣ ನಿಸ್ಸಂದೇಹವಾಗಿ ಬೋಂಟ್ರರು ಬೇಸಾಯಗಾರರಾಗಿದ್ದರು ಎನ್ನಬಹುದು.
ಕೈರಬೆಟ್ಟು ಮನೆತನದಲ್ಲಿ 600 ಕ್ಕೂ ಹೆಚ್ಚು ಯುದ್ಧ ತರಬೇತಿಗೊಂಡ ಯೋಧರಿದ್ಧರು. ಅವರು ಗರಡಿಯಲ್ಲಿ ಸಾಧನೆ ಮಾಡುತ್ತಿದ್ದರು. ಸ್ಥಳೀಯ ರಾಜರ ಪರಸ್ಪರ ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ವಿಜಯನಗರದವರ ಯುದ್ದಗಳಲ್ಲಿಯೂ ಈ ಮನೆತನಗಳ ಯೋಧರು ಭಾಗವಹಿಸಿದ್ಧಿರಬೇಕು. ಈ ಬಗ್ಗೆ ಕೈರಬೆಟ್ಟಯ ಬೋಂಟ್ರ ಮನೆಯ ಎಗ್ಗಜ್ಜ ಬೊಗ್ಗಜ್ಜರ ಇತಿಹಾಸ ಹೇಳುತ್ತದೆ.

ಕೈರಬೆಟ್ಟು ನೇರ್ಲ ಗ್ರಾಮದ ಭೂಮಿ ಬೋಂಟ್ರರಿಗೆ ಸೇರಿತ್ತು. ಕೃಷಿ ಸಾಗುವಳಿಗಾಗಿ ಪರಿಶಿಷ್ಟ ವರ್ಗದ 60 ಕ್ಕೂ ಹೆಚ್ಚು ಕುಟುಂಬಗಳಿಗೆ ಕೇರಿ ನಿರ್ಮಿಸಿಕೊಡಲಾಗಿತ್ತು. ಅವರಿಗೆ ದೀಪಾವಳಿ ಹಬ್ಬ ಆಚರಿಸಲು ಭೂಮಿ ಉಂಬಳಿ ಬಿಟ್ಟಿದ್ದರು. ಕಂಬಳ ಮತ್ತು ದೈವಗಳ ನೇಮ ಕಟ್ಟು ಕುಟುಂಬಗಳಿಗೂ ನೇಮವಿತ್ತು.

ನಂದಳಿಕೆಯ ಮಹಾಲಿಂಗೇಶ್ವರ ದೇವಸ್ಥಾನದ ಸಿರಿಜಾತ್ರೆಗೆ ಚಪ್ಪರ ತೋರಣಕ್ಕೆ ಮರ ಕಡಿಯುವ ಮುನ್ನ ವೃಕ್ಷ ಪೂಜೆಯ ಸಂಪ್ರದಾಯ ಕೈರೊಟ್ಟು ಬೋಂಟ್ರ ಮನೆಯಲ್ಲಿ ನಡೆಯುತ್ತಿತ್ತು ಎಂದು ಹೇಳುತ್ತಾರೆ. ವೃಕ್ಷ ಪೂಜೆಗೆ ಮುನ್ನ ಹರಿಜನರು ಕ್ಯರೊಟ್ಟು ಮನೆಗೆ ಬಂದು ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಹೂವು ಹಣ್ಣುಗಳನ್ನು ಬಾಳೆ ಎಲೆಯಲ್ಲಿ ಇಟ್ಟು ದೈವ ದೇವರುಗಲಿಗೆ ಪ್ರಾರ್ಥಿಸಿ ಪೂಜಿಸಿ ಕಾಣಿಕೆ ಪಡೆದು ನಂತರ ಪೂಜಿಸಿದ ಪ್ರಸಾದವನ್ನು ಕಡಿಯುವ ಮರಕ್ಕೆ ಹಾಕಿ ಪ್ರಾರ್ಥಿಸಿ ಮರ ಕಡಿಯುವ ಸಂಪ್ರದಾಯವಿದೆ ಎನ್ನುತ್ತಾರೆ ಹಿರಿಯರು.

ನಂದಳಿಕೆ ಅರಮನೆಯಲ್ಲಿ ಕಂಬಳದ ನಂತರ ಕಂಬಳತ್ತಾಯ ದೈವ ವೇಷ ಸಹಿತ ನಂದೊಳ್ಗೆ ಪೊಸ ಇಲ್ಲ ಮನೆಯ (ಕೈರೊಟ್ಟು ಮನೆಯ ಕವಲು) ಮಾಯಂದಾಲ್ ಗುಡಿಗೆ ಬಂದು ಅಗೆಲ್ ಸೇವೆಯಾಗಿ ಕುಣಿಯುವುದು ಸಂಪ್ರದಾಯ. ಆಗ ನಂದಿಗೋಣನಿಗೆ ಭತ್ತ, ತೆಮಗಿನಕಾಯಿ ಮತ್ತು ಬಂಟನಿಗೆ ಅಗೇಲು ನೀಡುತ್ತಾರೆ. ನೇಮಕ್ಕೆ ಎಣ್ಣೆ ಕೊಡುವುದು ಪೊಸ ಇಲ್ಲ್‍ನಲ್ಲಿಯೇ. ಮಹಾಲಿಂಗೇಶ್ವರ ದೇವಸ್ಥಾನದ ರಾಶಿ ಪೂಜೆ ಮೇ 1 ಅಥವಾ ಪಗ್ಗು 18 ರಂದು. ಅಂದು ಅಬ್ಬಗ ದಾರಗ ಜನ್ಮೋತ್ಸವ – ಉರ್ಕಿದೊಟ್ಟಿನಲ್ಲಿ 9 ದಿನಗಳ ರಾಶಿ ಪೂಜೆ. ಈ ಪೂಜಾ ಪ್ರಸಾದವನ್ನು ಮಂಚದಲ್ಲಿಟ್ಟು ನಂತರ ವಾದ್ಯ ವೈಬವದೊಂದಿಗೆ ಪೊಸ ಇಲ್ಲ್ ಬೋಂಟ್ರ ಮನೆಗೆ ತರುತ್ತಿದ್ದ ಪದ್ಧತಿಯನ್ನು ಸುಮಾರು 30 ವರ್ಷಗಳ ಹಿಂದೆ ನಿಲ್ಲಿಸಲಾಗಿದೆಯಂತೆ. ಕಲ್ಯಾ ಕೈರಬೆಟ್ಟು ನೇಲ್ಯದ ರಾಜು ಬೋಂಟ್ರರಿಗೂ ಕಾನೊಟ್ಟು ಹೆಗ್ಗಡೆ ಮನೆತನದ ಬಂಟ ಮಹಿಳೆಗೂ ಆದ ವ್ಯಾಜ್ಯದಿಂದ ಪೊಸ ಇಲ್ಲ್ ಮನೆಯ ಪ್ರಸಾದದ ಗೌರವವನ್ನು ತಡೆಯಲಾಯಿತಂತೆ. ರಾಜು ಬೋಂಟ್ರರು ದೇವಸ್ಥಾನಕ್ಕೆ ವಮತಿಗೆ ಕಾಣಿಕೆ ನಿಲ್ಲಿಸಿದರು. ಮುಂದೆ ದೇವರ ಅಪ್ಪಣೆಯಂತೆ ವಂತಿಗೆ ಸಲ್ಲಿಸಲು ಆರಂಭಿಸಿದರಂತೆ.

ತುಲಾಯಿ ಬೋಂಟ್ರ ಕೈರೊಟ್ಟು ನೇಲ್ಯ ಮನೆತನದ ಮೂಲ ಪುರುಷ ಎನ್ನುತ್ತಾರೆ. ಈ ಮನೆತನದ ಆದಿಮನೆ ಕೈರಬೆಟ್ಟುನಿನಲ್ಲೇ ಸ್ವಲ್ಪ ದೂರದಲ್ಲಿದೆ. ಶಿವಪ್ಪ ಬೋಂಟ್ರ, ಪಕೀರ ಬೋಂಟ್ರ, ದಾದು ಬೋಂಟ್ರ, ಹೊನ್ನಯ ಬೋಂಟ್ರ ಈ ಮನೆತನದ ಪ್ರಸಿದ್ಧರು. ಸಿಂಹ ಆಯದ ಈ ಮನೆಯಲ್ಲಿ ನಾಯಕರಿಗೆ ಪಟ್ಟವಾಗುತ್ತಿತ್ತು. ದಾದು ಬೋಂಟ್ರರ ಕಾಲದಲ್ಲಿ ಸುಮಾರು 65 ಒಕ್ಕಲುಗಳಿದ್ದವು. ಕಲ್ಯಾಗ್ರಾಮ ಈ ಮನೆತನದ ಒಡೆತನಕ್ಕೆ ಸೇರಿತ್ತು. ಸುಮಾರು 5,000 ಸಾನಿರ ಮುಡಿ ಅಕ್ಕಿಯ ಭೂಮಿ ಈ ಮನೆತನಕ್ಕೆ ಸೇರಿತ್ತು. ಸುಮಾರು 100 ಕ್ಕೂ ಹೆಚ್ಚು ಮಂದಿ ಸದಸ್ಯರ ಕೂಡು ಕುಟುಂಬ ಇದಾಗಿತ್ತಂತೆ. ಇದಕ್ಕೆ ಈ ಮನೆಯಲ್ಲಿ ಇದ್ದ 100 ಕಂಚಿನ ಬಟ್ಟಲುಗಳೇ ಸಾಕ್ಷಿ.

ಬಿಟೀಷರ ಕಾಲದಲ್ಲಿ 1001 ರೂಪಾಯಿ ತೆರಿಗೆ ಕಟ್ಟುತ್ತಿದ್ದ ಅತೀ ಶ್ರೀಮಂತ ಮತ್ತು ಮೊದಲನೆಯ ಮನೆತನ ಇದಾಗಿತ್ತು. ಎರಡನೆ ಮನೆ ಕರ್ನಿರೆ ಕೊಪ್ಪಲ ಮನೆ ಮುಲ್ಕಿ ಮಂಗಳೂರು. ಅತೀ ಹೆಚ್ಚು ತೀರ್ವೆ ಕಟ್ಟುತ್ತಿದ್ದ ಮನೆತನಗಳಿಗೆ ಬ್ರಿಟಿಷ್ ಸರಕಾರದಲ್ಲಿ ವಿಶೇಷ ಗೌರವಗಳಿದ್ದವು. ಈ ಮನೆತನಕ್ಕೆ ಪಟೇಲಿಕೆ ಇತ್ತು. ದಾದು ಬೋಂಟ್ರರು ನಕ್ರೆ ಗ್ರಾಮದ ಪಟೇಲರಾಗಿದ್ದರು. ಹಾಗೇಯೇ ಮುದ್ದಣ್ಣ ಬೋಂಟ್ರರು ಪಟೇಲರಾಗಿದ್ದರು.

ದುಗ್ಗಣ್ಣ ಬೋಂಟ್ರರು ಕಳೆದ ಶತಮಾನದಲ್ಲಿ ತಾಲೂಕು ಬೋರ್ಡ್ ಪ್ರೆಸಿಡೆಂಟ್ ಆದವರು. ಈ ಮನೆತನದ ಮೂಲ ಬಳಿ ಕರ್ಕೇರ. ತುಲಾಯಿ ಬೋಂಟ್ರ ಕಾಲದಲ್ಲಿ ಅವರ ಅಳಿಯಂದಿರು ಯುದ್ಧಕ್ಕೆ ಹೋಗುವ ಪ್ರಸಮಗ ಬಂತು. ಯುದ್ಧದಲ್ಲಿ ಗೆದ್ದು ಬಂದುದರಿಂದ ಇದು ಬಂಗೇರ ಬಲಿಯವರಿಗೆ ಸೇರಿತು. ಈ ಮನೆತನದ ಎಗ್ಗಜ್ಜ ಬೊಗ್ಗಜ್ಜ ಎಂಬ ವೀರರು ವಿಜಯ ನಗರಕ್ಕೂ ಹೋಗಿ ಯುದ್ಧದಲ್ಲಿ ಭಾಗವಹಿಸಿದ್ದರೆಮಬ ಹೇಳಿಕೆಯೂ ಇದೆ.

ಈ ಮನೆತನ ಶತಮಾನಗಳಿಂದಲೂ ಶೌರ್ಯ ಸಾಹಸ, ಆಡಳಿತಕ್ಕೆ ಹೆಸರಾಗಿತ್ತು. ಮನೆಯ ಮೂಂದಿನ ಗದೆಯಲ್ಲಿ ಸುಮಾರು 20 ವರ್ಷಗಳ ಹಿಂದಿನವರೆಗೂ ಪೂಕರೆ ಹಾಕಿ ಕಂಬಳ ನಡೆಯುತ್ತಿತ್ತು. ಇ ಮನೆಯ ಆದಿ ಮನೆಯಲ್ಲಿ ಕಂಬಳತ್ತಾಯ ದೈವದ ಅರದಲ ಹಾಕುತ್ತಿದ್ದರು. ಕಂಬಳಕ್ಕೆ ಕುದುರೆ, ನಂದಿಗೋಣನ ವೇಷವನ್ನು ಹಾಕುತ್ತಿದ್ದರೆಮದು ಅರ್ಜುನ್ ದೇವ್ ಕಲ್ಯಾ ಅವರು ತಿಳಿಸಿದರು. ನಾರಾಯನ ಕಲ್ಯಾರವರದ್ದು ಕೊನೆಯ ಪಟ್ಟಾಭಿಷೇಕವಾಗಿತ್ತು. ನಾರಾಯಣ ಕಲ್ಯಾಯವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕರೂ ಆಗಿದ್ದರು. ಇವರ ಮಗ ಶಿವಶಂಕರ ಬೋಂಟ್ರ.

ಈ ಮನೆತನದ ಸದಸ್ಯರು ಡಾಕ್ಟರು, ವಕೀಲರು ಉದ್ಯಮಿಗಳಾಗಿ ವಿವಿಧ ಊರುಗಳಲ್ಲಿ ನೆಲೆ ನಿಂತಿದ್ದಾರೆ. ದಯಾನಂದ ಬೋಂಟ್ರ, ದಿವಂಗತ ಭಕ್ತವತ್ಸಲ ಬೋಂಟ್ರ ಗುಜರಾತಿನಲ್ಲಿ ನಾಮಾಂಕಿತ ಉದ್ಯಮಿಗಳು. ಪಡುಬಿದ್ರಿಯ ದಾ. ನಾರಾಯಣ ಟಿ ಅಂಚನ್ (ಅಂಚನ್ ಡಾಕ್ಟರ್) ಇ ಮನೆಗೆ ಅಲಿಯನಾಗಿ ಬಂದವರು. ಈ ಬೋಂಟ್ರ ಮನೆತನದವರು ಸಾರ್ವಜನಿಕ ಶಿಕ್ಷನಕ್ಕಾಗಿ ಶತಮಾನದ ಮೊದಲ ಶಾಲೆಯನ್ನು ತೆರೆದವರು.

ಕಲ್ಯಾ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾಗಿ ಇ ಕೈರಬೆಟ್ಟು ಮನೆತನದವರು ಇದ್ದಾರೆ. ಇಲ್ಲಿನ ಜಾತ್ರಾ ಸಂಧರ್ಭದಲ್ಲಿ ಮತ್ತು ಗರಡಿಯ ನೇಮ ಸಂದರ್ಭದಲ್ಲಿ ಹಾಗೂ ಈ ಮನೆತನದ ಪಿಲಿ ಚಾಮುಂಡಿ ದೌದ ನೇಮ ಸಂಧರ್ಭದಲ್ಲಿ ದೇವಿಯನ್ನು ಗದ್ದಿಗೆ ರೂಪದಲ್ಲಿ ಈ ಮನೆಗೆ ತಂದು ಎದುರಿನ ಬಾಕ್ಯಾರಿನಲ್ಲಿ ಇಟ್ಟು ನಂತರ ಅಲ್ಲಿ ಪೂಜೆಯಾಗಿ ಗರಡಿಗೆ ಮತ್ತು ದೈವಸ್ಥಾನಕ್ಕೆ ಕೊಂಡೊಯ್ಯವ ಸಂಪ್ರದಾಯವಿದೆ.

ದೇವಿಗೆ ಒಮದು ಬಲಗೈ ಬಂಟನಾಗಿ ಒಂದು ದೈವ ಬೇಕು ಎಂದು ತೋರಿದಂತೆ ಕುಕ್ಕುಂದೂರು ಎಂಬಲ್ಲಿನ ಪಿಲಿ ಚಾಮುಂಡಿ ಮತ್ತು ಬಂಟ ದೈವಗಳನ್ನು ಶಿವಪ್ಪ ಬೋಂಟ್ರರು ತಂದು ಈ ಮನೆಯಲ್ಲಿ ಆರಾಧಿಸಿದರಂತೆ. ಮನೆಯ ಒಳ ಪ್ರವೇಶಿಸುವಾಗ ನಮ್ಮ ಎಡ ಭಾಗದಲ್ಲಿ ಇರುವ ಕೋಟೆಯಲ್ಲಿ ಪಿಲಿ ಚಾಮುಂಡಿ ಬಂಟ ದೈವಗಳ ಪೂರ್ತಿ ಇದೆ. ಬೆಳ್ಲಿಯ ಮೊಗ ಮತ್ತು ದೈವದ ಚಿನ್ನಾಬರನಗಳನ್ನು ಲಾಕರ್‍ನಲ್ಲಿ ಇಡಲಾಗಿದೆ. ಇದೇ ಕೋಣೆಯಲ್ಲಿ ಹಿರಿಯಾಯ ಎಂಬ ನೆಲೆಯಲ್ಲಿ ಆರಾಧನೆಗೊಳ್ಳುವ ಶಿವಪ್ಪ ಬೋಂಟ್ರರ ಮರದ ಮತ್ತು ಬೆಳ್ಲಿಯ ಮೂರ್ತೀಗಳಿವೆ. ಇವರಿಗೆ ತರಕಾರಿ ಅಡುಗೆಯ ಅಗೇಲು ಬಡಿಸುತ್ತಾರೆ. ಪಿಲಿ ಚಾಮುಂಡಿ ಮತ್ತು ಬಂಟ ದೈವಗಳಿಗೆ ನಿಲ್ಲಿಗುಡ್ಡೆ ಎಂಬಲ್ಲಿ ದೇವಸ್ಥಾನವಿದ್ದು ಪ್ರತೀವರ್ಷ ಕೈರಬೆಟ್ಟು ದೊಡ್ಡಮನೆ (ನೇಲ್ಯ) ದಿಂದ ಭಂಡಾರ ಹೋಗಿ ನೇಮವಾಗುತ್ತದೆ.

ಕೈರಬೆಟ್ಟುವಿನಲ್ಲಿ ಈ ದೊಡ್ಡ ಮನೆ ದೊಡ್ಡ ಮನೆಯು ಹೆಸರಿಗೆ ತಕ್ಕಂತೆ ಬೃಹದಾಕಾರದ ಅನೇಕ ಬೋದಿಗೆ ಕಂಬಗಳುಳ್ಳ ದಪ್ಪನೆಯ ಮರದ ಮುಚ್ಚಿಗೆ ಉಪ್ಪರಿಗೆ ಮನೆ. ಸುತ್ತು ಮುದಲಿನ ಮನೆಯ ಮುಖ್ಯ ದ್ವಾರದಲ್ಲಿ ಸುಮಾರು 8 ಬೃಹತ್ ಗಾತ್ರದ ಸುಂದರ ಕೆತ್ತನೆಗಳುಳ್ಳ ಬೋದಿಗೆ ಕಂಬಗಳಿವೆ. ಸುಂದರ ಕೆತ್ತನೆ ಎರಡು ಕಿಟಕಿಗಲಿವೆ. ಆನೆಬಾಗಿಲು ಎತ್ತರವಾಗಿದ್ದು

ಸುಂದರವಾಗಿದೆ. ಒಳ ಪ್ರವೇಶಿಸುತ್ತಿದ್ದಂತೆ ಮತ್ತೆ ಒಳ ಜಗಲಿ ಇದ್ದು ಇಲ್ಲಿಯೂ ನಾಲ್ಕು ಸುಂದರವಾದ ಬೋದಿಗೆ ಕಂಬಗಳಿವೆ. ಅಂಗಳ ಇಳಿದು ಮುಂದಕ್ಕೆ ಎತ್ತರದ ಚಾವಡಿ ಇದೆ, ಇಲ್ಲಿ ಎಲ್ಲಾ ಕಂಬಗಳು ಮನೆಗೆ ಅರಮನೆಯ ಶೋಭೆಯನ್ನು ತಂದಿವೆ. ಮನೆಯ ಎದುರುಗಡೆ ಬೈದೇರುಗಳ ಬಾಕ್ಯಾರು ಎಮಬ ಗದೆ ಇದೆ.
ಮನೆಯ ಬಲಭಾಗದಲ್ಲಿ ಪ್ರಸೂತಿ ಗೃಹ ಇತ್ತು. ಮನೆಯ ಮಧ್ಯ ಭಾಗದಲ್ಲಿ ಹಿಮದಿನ ಕಾಲದ ಆಯುಧಗಳನ್ನಿಡುವ ಸ್ಥಳವಿದೆ. ಮನೆಯ ಮುಂಬಾಗದ ಉಪ್ಪರಿಗೆಯುಳ್ಳ ಬೃಹತ್ ಪಡಿಪ್ಪಿರೆಯನ್ನು ದಾದು ಬೋಂಟ್ರರು ಕಟ್ಟಿಸಿದ್ದಾರೆ. ಹಾಳೆಕಟ್ಟೆ ಬೈದೇರುಗಳ ಗರಡಿ ನೇಮಕ್ಕೆ ಇಲ್ಲಿಂದ ಬೈದೇರುಗಳ ಭಂಡಾರ ಹೋಗುತ್ತದೆ. ಹಾಗೇಯೇ ಕಲ್ಯಾ ಪರಾರಿ ಜೈನ ಮನೆತನದಿಂದ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಗಳ ಭಂಡಾರ ಹೋಗುತ್ತದೆ.
ಕೈರಬೆಟ್ಟುವಿನಿಂದ ಭಂಡಾರ ಹೋಗುವುದು ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಈಗ ಪುನರಾರಂಭಗೊಂಡಿದೆ.ಸುಮಾರು 60ಕ್ಕೂ ಹೆಚ್ಚು ಒಕ್ಕಲು ಮನೆಗಳಲ್ಲದೆ ಪರಿಶಿಷ್ಟ ವರ್ಗದ 60 ಮಂದಿ ಕಟ್ಟಾಳುಗಳಿದ್ದರು. ಈ ಮನೆತನದ ಆಡಳಿತಕ್ಕೊಳಪಟ್ಟ ಕಲ್ಯಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಹಾನವಮಿ ಮತ್ತು ವಾರ್ಷಿಕ ಪೂಜೆಗೆ ಪೌರೋಹಿತ್ಯ ನಿರ್ವಹಿಸಲು 42 ಮುಡಿ ಅಕ್ಕಿ ಉಂಬಳಿ ನೀಡಿ ಬ್ರಾಹ್ಮಣರನ್ನು ತರಿಸಿ ಇಲ್ಲಿ ಉಳಿಸಿಕೊಂಡಿದ್ದರು.
ಉಳಿದ ಸಮಯದಲ್ಲಿ ಮರಾಠಿ ನಾಯ್ಕರು ಪುಜೆತಯನ್ನು ಮಾಡುತ್ತಾರೆ. ಇಲ್ಲಿ ಧ್ವಜಾರೋಹಣ ಆಗಿ ಮೂರು ದಿನದ ಉತ್ಸವ ನಡೆಸುತ್ತಾರೆ. 1955 ರಲ್ಲಿ ನಾರಾಯಣ ಕಲ್ಯಾರವರು ಇಲ್ಲಿ ಕೈರಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯನ್ನು ಕಟ್ಟಿಸಿದರು.
ಕಾರ್ಕಳ ಕೈರಬೆಟ್ಟು ಬೋಂಟ್ರ ಅರಸು ಮನೆತನ ನಂದಳಿಕೆ ಅರಸರಿಗೆ ಸಮಾನವಾದ ಅಂತಸ್ತು ವೈಭವ ಗೌರವಗಳನ್ನು ಹೊಂದಿದ್ದ ಮನೆತೆನ. ಈ ಮನೆತನದಲ್ಲಿ ಹುಟ್ಟಿದವರು ಶಿವು ಬೋಂಟ್ರ ತಮ್ಮ ಅಗಾದವಾದ ಶಕ್ತಿ, ಪರಾಕ್ರಮ ಮತ್ತು ನ್ಯಾಯ ಪರತೆಯಿಂದ ತಮ್ಮದೇ ಪ್ರಭಾ ವಲಯವನ್ನು ರೂಪಿಸಿಕೊಂಡವರು. ಊರಿನ ನ್ಯಾಯ ಪಂಚಾಯತಿಕೆಗಳನ್ನು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಇವರು ನ್ಯಾಯದಲ್ಲಿ ಇತ್ತಿದ ಕೈ. ಆಗಿನ ಕಾಲದಲ್ಲಿ ಇವರು ತಲೆಗೆ ರಾಜ ಪೇಟಿ ಕಟ್ಟಿ ರಾಕ ಕಚ್ಚೆ ಉಟ್ಟು ಬೆಳ್ಳಿ(ಬಿಳಿ) ಕುದುರೆಯಲ್ಲಿ ರಾಕ ಠೀವಿಯಿಂದ ಹೋಗುತ್ತಿದ್ದರು. ಇವರ ನಂತರದ ದಾದು ಬೋಂಟ್ರರೂ ಕುದುರೆಯಲ್ಲೇ ಸಾಗುತ್ತಿದ್ದರು.

ಇಲ್ಲಿ ಅನೇಕರಿಗೆ ಬೈದೇರುಗಳ, ಕೊಡಮಣಿತ್ತಾಯ ಮತ್ತು ಪಿಲಿಚಂಡಿ ದೈವದ ಮುಖಾಂತರ ಭಾಮದ ಪಟ್ಟವಾಗಿರುತ್ತದೆ. ಇವತ್ತಿಗೂ ಸುತ್ತ ಮುತ್ತಲಿನ ಆರು ಮಾಗಣೆಯಲ್ಲಿ ದೈವಗಳ ನೇಮದಲ್ಲಿ ಇವರ ಹೆಸರಿನ ಮರ್ಯಾದೆಯ ಕರೆ ಇದೆ. ಅಗಾಧ ಸಾಹಸಿಯಾಗಿದ್ದ ಇವರು ಗರಡಿ ವಿದ್ಯೆಯಲ್ಲೂ ಪರಿಣಿತರಾಗಿದ್ದರೆಂತೆ. ತಮ್ಮ ಸಹಾಸ ಮತ್ತು ನ್ಯಾ ಪರತೆಯಿಂದ ಹೆಸರುವಾಸಿಯಾಗಿದ್ದ ಇವರು ಇವತ್ತಿಗೂ ಜನಮಾನಸದಲ್ಲಿ ಮನೆಮಾತಾಗಿದ್ದಾರೆ.
ಇವರ ಬಗ್ಗೆ ಮನೆಯವರು ಅತ್ಯಮತ ಉತ್ಸಾಹದಿಂದ ಗತಕಾಲದ ನೆನಪನ್ನು ಬಿಚ್ಚಿಡುತ್ತಾರೆ. ಕೈರೊಟ್ಟು ಮನೆತನದಲ್ಲಿ ಪ್ರಾಚಿನದಲ್ಲಿ ಬೈದೇರುಗಳ ಸಾನಿದ್ಯವಿರಲಿಲ್ಲ. ಇಲ್ಲಿನ ಸುತ್ತಮುತ್ತಲಿಗೆ ನಿಟ್ಟರೆ ಗರಡಿಯೇ ಗ್ರಾಮ ಗರಡಿ ಆಗಿತ್ತು. ಸಂಪ್ರದಾಯ ಪ್ರಕಾರ ನಿಟ್ಟೆ ಗರಡಿಯಲ್ಲಿ ನೇಮಕ್ಕೆ ಎಣ್ಣೆ ಬುಲ್ಯ ಕೊಡಬೇಕಾದರೆ ಕೈರಬೆಟ್ಟು ದೊಡ್ಡಮನೆಯ ಮತ್ತು ಕಲ್ಯಾ ಪರಾರಿ ಜೈನ ಮನೆತನದ ಯಜಮಾನರ ಉಪಸ್ಥಿತಿ ಇರಬೇಕು.
ಒಮ್ಮೆ ಈ ಎರಡು ಮನೆತನದವರು ಗರಡಿ ನೇಮಕ್ಕೆ ಹೋಗುವುದು ಸ್ವಲ್ಪ ತಡವಾಯಿತು. ಆಗ ಅಲ್ಲಿನ ಮುಖ್ಯಸ್ಥರು ಇವರನ್ನು ಕಾಯದೆ ದೈವ ಕಟ್ಟುವವರಿಗೆ ಎಣ್ಣೆ ಬುಲು ಕೊಡಿಸಿದರು. ಆ ಸಮಯದಲ್ಲಿ ಇಲ್ಲಿಗೆ ಬಂದ ಪರಾರಿ ಮತ್ತು ಕೈರಬೆಟ್ಟುವಿನ ದೊಡ್ಡ

ಮನೆಯ ಯಜಮಾನರು ಗರಡಿಯ ಅಂಗನದಿಂದ ಇಬ್ಬರು ಒಂದು ಹಿಡಿ ಮಣ್ನು ಹಿಡಿದುಕೊಂಡು ಪ್ರಾರ್ಥನೆ ಮಾಡಿ ದುಗ್ಗಣ್ಣ ಬಾಕ್ಯಾರು ಎಮಬಲ್ಲಿ ತಮದು ಹಾಕುತ್ತಾರೆ.
ಅವರ ಪ್ರಾರ್ತನೆಯಂತೆ ಬೈದೇರುಗಲು ಮತ್ತು ಕುಕ್ಕಿನಂತಾಯ ಕೊಡಮಣಿತ್ತಾಯ ದೈವಹಳು ಅವರನ್ನು ಹಿಂಬಾಲಿಸಿ ದುಗ್ಗಣ್ಣ ಬಾಕ್ಯಾರಿಗೆ ಬರುತ್ತೇವೆ. ದೈವ ಕೊಡಮಣಿತ್ತಾಯನು “ನಾವು ಪರಾರಿ ಜೈನ ಮನೆತನದಲ್ಲಿ ನೆಲೆಯೂರುತ್ತೇವೆ” ಎಂದರು. “ ನೀವು ನಮ್ಮೊಂದಿಗೆ ಬನ್ನಿ” ಎಂದು ಬೈದೇರುಗಳನ್ನು ಕರೆದಾಗ ಬೈದೇರುಗಳು “ನಾವು ಕೈರಬೆಟ್ಟು ಬೋಂಟ್ರ ದೊಡ್ಡ ಮನೆಗೆ ಹೊಗಿ ನೆಲೆಯಾಗುತ್ತೇವೆ” ಎಂದು ಹೇಳುತ್ತಾರೆ.

ಅದರಂತೆ ಅವರ ಕೈರಬೆಟ್ಟು ಮನೆಗೆ ಹೋಗುವಾಗ ಮನೆಯ ಆನೆ ಬಾಗಿಲು ಮುಚ್ಚಿರುತ್ತದೆ. ಮನೆಯ ಎಡಭಾಗದನ ಕಿರು ಬಾಗಿಲಿನಿಂದ ಬೈದೇರುಗಳು ಒಳ ಪ್ರವೇಶಿಸಿ ನಂತರ ನೆಲೆಯೂರುತ್ತಾರೆ. ಆದ್ದರಿಂದ ಈಗಲೂ ಮನೆಯ ಹೆಬ್ಬಾಗಿಲನ್ನೂ ಮುಚ್ಚಲಾಗುವುದಿಲ್ಲ. ಇ ಮನೆತನದಲ್ಲಿ ಸುಮಾರು 500 ಕ್ಕೂ ಹೆಚ್ಚು ಕುಟುಂಬಿಕರು ವಾಷಿಕ ಪರ್ವದಮದು ಬಂದು ಸೆರುತ್ತಾರೆ.

ಈ ಮನೆಯಲ್ಲಿ ಪಿಲಿ ಚಾಮುಮಡಿ, ಬಂಟ , ಓಡಿಲ್ತಾಯ, ಮೂರು ಪಂಜುರ್ಲಿ ದೈವಗಲು ಮತ್ತು ವರ್ತೆ ದೈವವಿದೆ. ಚಾವಡಿಯ ಹಿಂಬದಿಯ ಕೋಣೆಯಲ್ಲಿ ಬ್ಯದೇರುಗಳ ಭಂಡಾರವಿದೆ. ಗರಡಿಯಲ್ಲಿ ಮತ್ತು ದೇವಸ್ಥಾನದಲ್ಲಿ ಇ ಮನೆತನಕ್ಕೆ ಗೌರವದ ಕರೆಯಿದ್ದು ಶಿವಪ್ಪ ಬೋಂಟ್ರರ ಹೆಸರನ್ನೇ ದೈವಗಲು ಕರೆಯುತ್ತವೆ. ಇ ಗ್ರಾಮದಲ್ಲಿ ಶುಬ ಕಾರ್ಯಕ್ರಮಗಳು ಆಗುವುದಿದ್ದರೇ ಇಲ್ಲಿ ಬಂದು ಎಲೆ ಅಡಿಕೆ ಕೊಟ್ಟು ಕರೆಯುವ ಸಂಪ್ರದಾಯವಿದೆ.

ಊರಿನಲ್ಲಿ ಯಾವುದೇ ಸಮುದಾಯದವರ ಮದುವೆ ಆದರೂ ಈ ಮನೆಗೆ ಗೌರವದ ಆಮಂತ್ರನ ಇತ್ತು. ವಧು-ವರರು ಇಲ್ಲಿ ಬಂದು ಹಾಲು ಕುಡಿದು ಆಶೀವಾದ ಪಡೆಯುವ ಸಂಪ್ರದಾಯ ವಿತ್ತು. ಊರಿನ ಅನೇಕ ನ್ಯಾಯ ತೀರ್ಮಾನ ಈ ಮನೆಯಲ್ಲಿ ನಡೆದಿದೆ. ಸುಮಾರು 4 ಭೂಮಿ ಮನೆತನದ ದ್ಯವಗಳಿಗೆ ಬಿಡಲಾಗಿದೆ. ಒಟ್ಟಾಗಿ ಕೈರಬೆಟ್ಟು ಮನೆತನವು ಪ್ರಾಚೀನ ಅರಸು ಮನೆತನಗಳಂತೆ ಗತ್ತು ಗಾಂಭೀರ್ಯದಿಂದ ಮೆರೆದ ಮತ್ತು ಮೆರೆಯುತ್ತಿರುವ ಪ್ರಸಿದ್ಧ ಮನೆಯಾಗಿದೆ.

ಪ್ರತೀ ವರ್ಷ ತಿಂಗಳಲ್ಲಿ ಶ್ರೀ ಬಹ್ಮ ಬೈದೆರ್ಕಳ ನೇಮೊತ್ಸವು ಜರಗುತ್ತಿವೆ. ಹಾಗೂ ಹರಕೆಯ ನೇಮೊತ್ಸವು ಜರಗುತ್ತದೆ. ಮತ್ತು ಸಂಕ್ರಮಣದಂದು ಹೂ ನೀರು, ಪೊಜೆಯನ್ನು ನೀಡುತ್ತಾರೆ. ಕೋಟಿ ಚೆನ್ನಯರು ಮಾತ್ರವಲ್ಲದೆ ಪರಿವಾರ ದೈವಗಳೂ ಕೂಡ ಇವೆ.

ಹೀಗೆ ಮದುವೆಯ ಭಾಗ್ಯ ಕೂಡಿ ಬರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉದ್ಯೊಗ, ವ್ಯವಹಾರ, ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಇಲ್ಲಿ ಬಂದು ಸಂಕಲ್ಪಮಾಡಿ ಸಹಸ್ರಾರು ಜನರು ಒಳಿತ್ತನ್ನು ಕಂಡಿದ್ದಾರೆ.

ಶ್ರೀ ಬ್ರಹ್ಮ ಬೈದೆರ್ಕಳ ಗರೋಡಿ ಯ ವಿಳಾಸ

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ, ಕಲ್ಯಾ
ಅಂಚೆ: ಕಲ್ಯಾ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ – 574110
ದೂರವಾಣಿ : 9980021536, 9900148586

 

ಕಮೀಟಿ

 ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ, ಕಲ್ಯಾ,