– ಎಣ್ಮೂರು ಆದಿಗರಡಿ ಪರಿಸರದಲ್ಲಿ ಕೋಟಿ ಚೆನ್ನಯರ ಸಮಾದಿಗಳಿವೆ. ಪಕ್ಕದಲ್ಲೇ ಕೋಟಿ ಚೆನ್ನಯ ಆಯುಧಗಳನ್ನು ಹುಗಿದಿರಿಸಲಾದ ಸ್ಥಳ ಸಮಾದಿ ಪಕ್ಕದಲೇ ಇದೆ.
– ಎಣ್ಮೂರು ಆದಿಗರಡಿ ಪರಿಸರದಲ್ಲಿ ಉಳ್ಳಾಕುಲು ಮಾಡ ಮತ್ತು ಬೆರ್ಮೆರ್ ಸ್ಥಾನವಿದೆ.
– ಎಣ್ಮೂರು ಕೆಂಪು ಕೇಪುಲ ಕಜೆಮಲೆಯಲ್ಲಿ ಉಳ್ಳಾಕುಲು ಮಾಡ ಮತ್ತು ಬೆರ್ಮೆರ್ ಮೂಲಸ್ಥಾನವಿದೆ.
– ಎಡಮಂಗಲದ ಕಲ್ಲೆಂಬಿ ದೋಳದಲ್ಲಿ ಕಿನ್ನಿದಾರುವಿನ ಮನೆಯಿದೆ. ಪಕ್ಕದಲ್ಲಿನ ತೆಂಗಿನಕಟ್ಟೆ ಪದ್ಮಕಟ್ಟೆ ಸ್ಥಳವೆನ್ನುತ್ತಾರೆ.
– ಕಿನ್ನಿದಾರುವಿನ ಮನೆಯ ಮುಂದುಗಡೆ ಬಲಕ್ಕೆ ಪೈಯ್ಯ ಬೈದ್ಯನ ಕುಟುಂಬದ್ದೆನ್ನಲಾದ ದೈವದ ಗುಡಿ ಇದೆ.
– ಪಂಜ ಮತ್ತು ಎಣ್ಮೂರು ಸೀಮೆಗಳನ್ನು ಪ್ರತ್ಯೇಕಿಸುವ ಗಡಿಕಲ್ಲು ಮಚ್ಚಿಲ ಪ್ರದೇಶದಲ್ಲಿದೆ.
– ಕೋಟಿ ಚೆನ್ನಯರು ಗಡಿಕಲ್ಲು ಪುನಃ ಸ್ಥಾಪಿಸಿ ಬಂದು ನೀರು ಕುಡಿದ ಉಜಿರ್ಗುಂಡಿ ಇದೆ.
– ತುಪ್ಪೆ ಕಾಡಿನಲ್ಲಿ ಕೋಟಿ ಚೆನ್ನಯರು ಊರಿನವರ ಜತೆಗೂಡಿ ಹಂದಿ ಬೇಟೆಯಾಡಿದ ಸಂದರ್ಭ ಚೆನ್ನಯ ಸಿಟ್ಟಿನಿಂದ ತನ್ನ ಸುರಿಯದಿಂದ ತಿವಿದ ಕಾಸರಕನ ಮರವಿದ್ದ ಸ್ಥಳ ಕಡ್ತಿಕಾಯೇರ್ (ಮಂಜಲಪಾದೆ) ಯಲ್ಲಿದೆ.
– ಬೇಟೆಯಾಡಿ ಮಾಂಸ ಹಂಚಿಕೊಳ್ಳುವ ಅಜಕ್ಕಳವಿದ್ದ ಸ್ಥಳ ಕರಿಕ್ಕಳ ಪ್ರದೇಶದಲ್ಲಿದೆ. ಬೇಟೆಯಾಡಿ ಹಂದಿಗಾಗಿ ಎಣ್ಮೂರು ಮತ್ತು ಪಂಜದವರಿಗೆ ಜಗಳವಾದುದು ಇಲ್ಲೇ.
– ಕೋಟಿ ಚೆನ್ನಯರು ಮುದರ್ೂರಡ್ಕದಲ್ಲಿ ಗೋವಳರೊಡನೆ ಆಟವಾಡಿ ಸುರಿಯದಿಂದ ಬಾವಿ ಶೋಧಿಸಿ ನೀರು ಕುಡಿದ ಪ್ರದೇಶ ಎಡಮಂಗಲದ ಕೂಟಾಜೆಯಲ್ಲಿದೆ.
– ಕೋಟಿ ಚೆನ್ನಯರು ನೇರಂಕಿ ಮಾಗಣೆಯ ಈಗಿನ ಎಡಮಂಗಲದ ದಾರಿಯಲ್ಲಿ ಗೋವು ಮೇಯಿಸುವ ಗೋವಳದೊಡನೆ ಆಟವಾಡಿದ ಮದರ್ೂರಡ್ಕ ಪ್ರದೇಶವಿದೆ.
– ನಿಂತಿಕಲ್ಲು ಬಳಿ ಘಟ್ಟ ಇಳಿದು ಬಂದಿದ್ದ ಕಿನ್ನಿಮಾಣಿ ಪೂಮಾಣಿ ಹೊತ್ತು ತಂದ ಊರಿದ ಕಲ್ಲು ಇದೆ.ಸಕಲ ದ್ರವ್ಯ ಸಹಿತ ಈ ಕಲ್ಲನ್ನು ಎಣ್ಮೂರು ಬಲ್ಲಾಳನ ಕಾಲದಲ್ಲಿ ಆರೆಂಬಿ ಗೌಡರ ಮೂಲಕ ವ್ಯವಸ್ಥಿತವಾಗಿ ಇಲ್ಲಿ ಸ್ಥಾಪಿಸಲಾಯಿತು. ಬಂಟರು ಅರವಟ್ಟಿಗೆ ಕಟ್ಟೆಯಿಂದ ಕಾಯೇರ್ಮಾರಿಗಾಗಿ ಮುಂದೆ ನೇರಂಕಿ ಮಾಗಣೆ ದಾರಿಯಾಗಿ ಇಲ್ಲಿಗೆ ಬಂದಿದ್ದರು.
– ಅರವಟ್ಟಿಗೆಯಿಂದ ಪಂಜಕ್ಕೆ ಸಾಗುತ್ತಿದ್ದಾಗ ಕೋಟಿಚೆನ್ನಯರನ್ನು ಸೆರೆ ಹಿಡಿಯಲು ಸಂಚು ಹೂಡಿದ್ದ ನೆಲ್ಲಿ ಕಾಡು ಪ್ರದೇಶವಿದೆ. ಈ ದಾರಿಯಲ್ಲೇ ಈಗ ಗರಡಿಯೊಂದಿಗೆ ಹಿಂಬದಿಯಲ್ಲಿ ಕಾಯರ್ ಮಲೆ ಇದೆ.
– ಪಂಜ ಸೀಮೆಯ ಐಗಳ ಮಠವಂದು ಕರೆಸಿಕೊಂಡಿದ್ದ ಧರ್ಮಡ್ಕ ಪ್ರದೇಶವಿದೆ. ಬೊಳಿಯಾರು ಸಮೀಪದ ಬೊಮ್ಮೆಟ್ಟಿ ಎಂಬಲ್ಲಿರುವ ಇಲ್ಲಿ ಅರವಟ್ಟಿಗೆ, ಧರ್ಮ ನೀರ ಕಟ್ಟೆ ಇದೆ.
– ಧರ್ಮಡ್ಕ ಅರವಟ್ಟಿಗೆ ಪಕ್ಕದಲ್ಲೇ ಬಡಗುಭಾಗದಲ್ಲಿ ನೀರು ಕೊಡುವ ಅಯ್ಯನ ಮನೆ, ಮೂಡುಭಾಗದಲ್ಲಿ ದೈವದ ಬನ ಇದೆ.
– ಕೋಟಿ ಚೆನ್ನಯರ ಇತಿಹಾಸದೊಂದಿಗೆ ಹಾಸು ಹೊಕ್ಕಾಗಿರುವ ಐವತ್ತೊಕ್ಲು ಮನೆ ಇದೆ. ಇದರ ಪಕ್ಕವೇ ಕೋಟಿ ಚೆನ್ನಯರು ವಾಸವಿದ್ದ ಮನೆಯ ಪಂಚಾಗದ ಅವಶೇಷವಿದೆ.
– ದೇವ ಬಲ್ಲಾಳನ ಆಡಳಿತ ಪ್ರದೇಶವಾಗಿದ್ದ ನಡ್ಕದಲ್ಲಿ ಆದಿಬ್ರಹ್ಮಸ್ಥಾನವಿದೆ.
– ಎಣ್ಮೂರುವಿನಲ್ಲಿ ಕಟ್ಟಬೀಡು ಮನೆ ಇದೆ. ಬೀಡಿನ ಮುಂಭಾಗದಿಂದ ಕಂಬಳಗದ್ದೆಗೆ ಇಳಿಯುವ ಮೆಟ್ಟಿಲುಗಳಿವೆ.
– ಪಂಜದಲ್ಲಿ ಕೋಟಿ ಚೆನ್ನಯರ ಗರಡಿ ಇದೆ.
– ಎಣ್ಮೂರು ಬಲ್ಲಾಳರ ವಾಸ್ತವ್ಯದ ಬೀಡುಗಳಲ್ಲಿ ಒಂದಾದ ಪಿಜಾವು ಬೀಡಿದೆ. ಈ ಪ್ರದೇಶದಲ್ಲಿ ಒಂದು ಬನವಿದ್ದು ಅಲ್ಲಿಗೆ ದಾರಿ ದುರ್ಗಮವಾಗಿದೆ. ಬನದ ಒಳಗೆ ಅನೇಕ ಅಪೂರ್ವ ವಿಗ್ರಹಗಳಿವೆ. ಅವುಗಳಲ್ಲಿ ಒಂದು ವಿಶಿಷ್ಟ ಶೈಲಿಯ ನಾಗನ ಬಿಂಬವಿದೆ.
– ಪಂಜ ಕಡಬ ಮಾರ್ಗದ ಕಮಿಲ ಎಂಬಲ್ಲಿ ಚಂದುಗಿಡಿಯ ಮನೆಯ ಕುರುಹುಗಳಿವೆ. ಎಣ್ಮೂರು ಬಲ್ಲಾಳದ ಪಟ್ಟದಕಟ್ಟೆ ಮತ್ತು ಪಟ್ಟದ ಕಿರೀಟವನ್ನು ಕಡಬದವರು ಎಳೆದೊಯ್ಯುವಾಗ ಪಿಲಿಕುಂಞ ತಡೆದು ಮರಳಿ ಪಡೆದ ಸ್ಥಳವಿದು.
– ಕೋಟಿ ಚೆನ್ನಯರನ್ನು ಚಂದುಗಡಿ ಮೋಸದಿಂದ ಕೊಲ್ಲಿಸುವುದಕ್ಕೆ ಏಪರ್ಾಡುಗೊಳಿಸಿದ ಮನೆಯಿದ್ದ ಸ್ಥಳ ಕುದ್ವದಲ್ಲಿದೆ.
– ಎಣ್ಮೂರು ಬಲ್ಲಾಳರಿಗೆ ಇಕ್ಕೇರಿಯ ಅರಸರು ಮುರುಳ್ಯವನ್ನು ಒದಗಿಸಿದ ಶಿಲಾಶಾಸನವಿದೆ.
– ಪಿಜಾವಿನಲ್ಲಿ ಬಲ್ಲಾಳರ ವಂಶಜರು ಅಂತ್ಯಗೊಂಡಾಗ ಉತ್ತರಕ್ರಿಯೆಯಾಗಿ ನಿಮರ್ಿಸಿದರೆನ್ನಲಾದ ಬಳಪದ ಮೂತರ್ಿಗಳಿವೆ.
– ಬಲ್ಲಾಳರ ಕಾಲದಲ್ಲಿ ಆರಾಧಿಸಲಾಗುತ್ತಿದ್ದ ನಿಡ್ವಾಳ ಮಹಾವಿಷ್ಣು ದೇವಸ್ಥಾನ ಇದೆ.
– ಕಿನ್ನಿದಾರುವಿನ ಮನೆ ಎದುರುಗಡೆ ಕೋಟಿ ಚೆನ್ನಯರ ಪ್ರತೀಕವೆಂದು ಹೇಳಲಾಗುವ ಎರಡು ತಾಳೆಮರಗಳಿವೆ.
– ಕೆಮ್ಮಲೆಯಲ್ಲಿ ನಾಗಬ್ರಹ್ಮ ಗುಡಿ, ಆದಿಬ್ರಹ್ಮ ಗುಡಿ, ಉಳ್ಳಾಕುಲು ಮಾಡ ವಿದೆ.
– ಪಕ್ಕದಲ್ಲಿ ಕೋಟಿ ಪ್ರಾಣತ್ಯಾಗ ಮಾಡಿದ ಸ್ಥಳದಲ್ಲಿ ಕಲ್ಲಿನ ಅವಶೇಷಗಳಿವೆ.
– ಕಟ್ಟ ಕುಟುಂಬದ ಧರ್ಮದೈವ ಮತ್ತು ಉಲ್ಲಾಕುಳು ಗುಡಿ ಇದೆ.
– ನೆಲ್ಲಿಕಾಡು ಎಂಬಲ್ಲಿ ಪಂಜ ಎಣ್ಮೂರು ಬೆಳ್ಳಾರೆ ಸೀಮೆಗಳ ಗಡಿ ಪ್ರದೇಶವಿದೆ. ಈ ಗಡಿ ಪ್ರದೇಶದಲ್ಲಿ ಪಂಜದ ಗಡಿ ಕಾವಲುಗಾರರು ಇರುತ್ತಿದ್ದರೆಂಬ ಪ್ರತೀತಿ ಇದೆ.
– ನಿಂತಿಕಲ್ಲಿನಿಂದ ದೂರದಲ್ಲಿ ಊರುಸಾಗು ಇದೆ. ಊರು ಸಾಗಿ ಬಂದ ಕೋಟಿ ಚೆನ್ನಯರು ಉಳಕೊಂಡ ಈ ಮನೆಗೆ ಊರುಸಾಗು ಎಂಬ ಹೆಸರು ಬಂದಿದೆ.
– ಕೋಟಿ ಚೆನ್ನಯರನ್ನು ಮೋಸದ ಬಲೆಗೆ ಸಿಲುಕಿದ ಪ್ರದೇಶ ಪಂಜದ ಬೈಲು ಪ್ರದೇಶದಲ್ಲಿದೆ. ಹೊಸದಾಗಿ ಕಟ್ಟಲಾಗುತ್ತಿದ್ದ ಮನೆಯನ್ನು ಕೋಟಿ ಚೆನ್ನಯರನ್ನು ಬಂಧಿಸಲು ಬೇಕಾದ ಅನುಕೂಲತೆ ಕಲ್ಪಿಸಿಕೊಂಡು ಕಟ್ಟಲಾಗಿತ್ತು. ಇಲ್ಲಿಗೆ ದಿಂಡು ಮಲೆ ದಿಬ್ಬ ಎಂದು ಹೆಸರು.
– ಪಂಜ ಗರಡಿಯಿಂದ ಪಶ್ಚಿಮಕ್ಕೆ ಪಂಜ ಸೀಮೆಯ ಅರಮನೆಯ ಮನೆತನದ ಕುರುಹಿದೆ. ಅಲ್ಲೊಂದು ಬಿದಿರು ಪೊದೆಗಳಿಂದ ಎತ್ತರವಾದ ಸ್ಥಳವಿದೆ. ಬಿದಿರ ಹಿಂದಿನ ಎಡೆಯಲ್ಲಿ ಒಂದು ಸುರಂಗವಿದ್ದು ಈ ಸುರಂಗ ಪ್ರದೇಶಕ್ಕೆ ಗುಗ್ಗುರುಮಾಳ್ಯ ಎಂದು ಹೆಸರು.
– ಕೆಮ್ಮಲೆ ಪ್ರದೇಶದಲ್ಲಿ ಬೆಮರ್ೆರ್ ಮತ್ತು ಉಳ್ಳಾಕುಳು ಗುಡುಗಳಿವೆ. ಕೋಟಿ ಚೆನ್ನಯರು ತಮ್ಮ ತಾಯಿ ಹೇಳಿದ್ದ ಹರಕೆಯನ್ನು ತೀರಿಸಲು ಇಲ್ಲಿ ಬಂದಿದ್ದರೆಂದು ಪ್ರತೀತಿ.
– ಕೋಟಿ ಚೆನ್ನಯರ ಮರಣಾ ನಂತರ ಯುದ್ದ ಭೂಮಿಯಿಂದ ಬೀಡಿಗೆ ಶವಗಳನ್ನು ಅಂತ್ಯಸಂಸ್ಕಾರಕ್ಕಾಗಿ ಒಯ್ದು ಕಲ್ಲು ಕಟ್ಟ ಬೀಡು ಇದೆ.
ಆಧಾರ:-ಸುದ್ಧಿ ಬಿಡುಗಡೆ