ಡಿ.ಜಿ ನಡ್ಕ
ಹೆಸರು : ಎನ್ ಧರ್ಮಪಾಲ.
ಕಾವ್ಯ ನಾಮ : ಡಿ.ಜಿ ನಡ್ಕ. ಪಡ್ಡಿನಂಗಡಿ.
ಜನನ : 25-4-32.
ಉದ್ಯೋಗ : ನಿವೃತ್ತಿ ಅಧ್ಯಾಪಕ.
ಹವ್ಯಾಸ : ದಿನಪತ್ರಿಕೆ, ವಾರಪತ್ರಿಕೆ ಮಾಸಪತ್ರಿಕೆ ಓದುವುದು. ಪುಸ್ತಕಗಳನ್ನು ಓದುವುದು. ಸುಮಾರು ಐನೂರು ಪುಸ್ತಕಗಳ ಸಂಗ್ರಹ ಮುಂದುವರಿಯುತ್ತದೆ. ಜಾನಪದೀಯ ಇತಿಹಾಸದ ಕ್ಷೇತ್ರಿಯ ಅಧ್ಯಯನ. ದೈವ ದೇವರ ಪೌರಾಣಿಕ, ಇತಿಹಾಸದ ಅಧ್ಯಯನ. ಪ್ರಾಥಮಿಕ ಶಾಲಾ ಶಿಕ್ಷಣ ಸೇವೆ 24-10-52 / 31-12-1991 ಸುಮಾರು 40 ವರ್ಷದ ಶಿಕ್ಷಣ ಸೇವೆ. ಶಿಕ್ಷಕನಾಗಿ ಮಾಡಿದ ಸಾಧನೆಗಳು : ಆರು ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದಾಗ ಪ್ರತಿ ವರ್ಷ ವರ್ಧಂತಿ ಉತ್ಸಹ ಆಚರಣೆ. ಕುಮ್ಮಿ ಡೇನ್ಸ್, ಕೋಲಾಟ`11, ಲೇಜಂ, ನಾಟಕ ಅಭಿನಯಗಳ ತರಭೇತಿ ವಿದ್ಯಾರ್ಥಿಗಳಿಗೆ ಮಾಡಿಸಿದ್ದು. ಶಿಕ್ಷಣಕ್ಕಾಗಿ/ ಅಭಿನಯಕ್ಕಾಗಿ ಸುಮಾರು 30 ನಾಟಕಗಳ ರಚನೆ . ಇವುಗಳಲ್ಲಿ ಪ್ರಕಟವಾದ ನಾಟಕಗಳು. (1) ಮಕ್ಕಳೇ ದೇವರು. ಭಾವೈಕ್ಯ ಪ್ರಧಾನವಾದ ನಾಟಕ, (2) ಚಂದ್ರಹಾಸ (3) ಶಾಕುಂತಲ (4) ಸೀತಾ ಪರಿತ್ಯಾಗ- ಪೌರಾಣಿಕ ನಾಟಕಗಳು. ಈ ನಾಟಕಗಳು ಪುತ್ತೂರು ಸುಳ್ಯ ತಾಲೂಕುಗಳಲ್ಲಿ ತೆರೆಕಂಡಿದೆ. ಮಕ್ಕಳೇ ದೇವರು ಮತ್ತು ಶಾಕುಂತಲಾ ಜಿಲ್ಲೆಯಾದ್ಯಂತ ಪ್ರದರ್ಶನಕ್ಕೆ ಬಂದಿದೆ. (5) ಸುಳ್ಯದ 1837 ರ ಪ್ರಥಮ ಸ್ವಾತಂತ್ರ್ಯ ಸಮರ ಇತ್ತೀಚೆಗಿನ ನಾಟಕ ಬಿಡುಗಡೆ.
31-12-1991 ರಲ್ಲಿ ನಿವೃತ್ತಿಯಾದ ಮೇಲೆ ನಾಟಕದ ಗೀಳು ಕೊನೆಗೊಂಚು ಕಥೆ, ಕವನ ಮತ್ತು ಜಾನಪದೀಯ ಸಾಹಿತ್ಯದ ಕಡೆಗೆ ಒಲವು ಮೂಡಿತು. ಇದರಿಂದ ಕೆಲವು ಪುಸ್ತಕಗಳು ಬಿಡುಗಡೆಯಾದವು. (1) ಕೋಟಿ ಚೆನ್ನಯ, (2) ಉಲ್ಲಾಕುಳು/ ಅರಸುದೈವಗಳು (3) ಜೈಕಸಾನ್ ಜೈ ಜಪ್ಪಾನ್ – ರೈತಪರ ಮತ್ತು ಯೋಧಪರ ಸಂಗೀತ ನೃತ್ಯ ನಾಟಕ, (4) ಮುಕ್ತಿ, ಕಥಾಸಂಕಲನ- ಹಾಗೆ ಒಂಭತ್ತು ಪುಸ್ತಕಗಳು ಬಿಡುಗಡೆಯಾಗಿದೆ. ಸುಮಾರು 40 ಕಥಾಸಂಕಲನಗಳು ರಾಜ್ಯದ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸುಬ್ರಹ್ಮಣ್ಯ ಬಳ್ಪ ಪಂಜ, ಕಿಂಗಾಣಿ ಗುಡ್ಡೆ, ಎಣ್ಮೂರು, ಚೊಕ್ಕಾಡಿ, ಬೆಳ್ಕರೆ, ಪುತ್ತೂರು ಇಲ್ಲಿಯ ದೈವ ದೇವರ ಲೇಖನಗಳು ದ.ಕ ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸುಮಾರು 20 ನೆನಪಿನ ಸಂಚಿಕೆಗಳಲ್ಲಿ ಅಗ್ರ ಲೇಖನಗಳಾಗಿ ಮೂಡಿಬಂದಿದೆ. ಸುಳ್ಯ ಮತ್ತು ಪುತ್ತೂರು ಸುದ್ದಿ ಪತ್ರಿಕೆಗಳ ವಿಶೇಷ ಸಂಚಿಕೆಗಳಲ್ಲಿ ವಿವಿಧ ರೀತಿಯ ಮತ್ತು ಹಾಡುಗಳು ಪ್ರಕಟಗೊಡಿದೆ.
ಸಾಹಿತ್ಯ ಸೇವೆಗೆ ಮೆಚ್ಚಿ ಸುಮಾರು 30 ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಗಳು ದೊರಕಿವೆ. ಇವುಗಳಲ್ಲಿ ಮೂಲ್ಯವಾಗಿ ಕೆಲವು ಕೊಡಲಾಗಿದೆ.
(1) ರಾಜೋತ್ಸವ (2004) ಸುಳ್ಯ ತಾಲೂಕಿನ ಮಟ್ಟದ ಪ್ರಶಸ್ತಿ ಪತ್ರ. ಹಾಗೂ
(2) ದ.ಕ ಜಿಲ್ಲಾಮಟ್ಟದ (2010) ರಾಜೋತ್ಸವ ಪ್ರಶಸ್ತಿ. ಕೊಡುಗೆ ಮತ್ತು ದ.ಕ ಜಿಲ್ಲಾ.
(3) ಒಕ್ಕಲಿಗರ ಯಾನೆಗೌಡರ ಸಮಾವೇಶದಲ್ಲಿ ಮೂರನೆಯದಾಗಿ ಪ್ರಶಸ್ತಿ.
(4) ತುಳು ನಾಟಕ ಕೃತಿಗೆ ಧರ್ಮಸ್ಥಳ ರತ್ನಕುಮಾರ ಹೆಗ್ಡೆಯವರ ಸ್ಮರನಾರ್ಥವಾಗಿ 1981 ರಲ್ಲಿ ಮತ್ತು 1982 ಎರಡು ನಗದು ಬಹುಮಾನದೊಡನೆ ಪ್ರಶಸ್ತಿ ಪತ್ರಗಳು.
ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಸನ್ಮಾನ ಪದವೀರ ವಿದ್ಯಾಥರ್ಿಗಳಿಗೆ ಸ್ಥಳೀಯ ಇತಿಹಾಸದ ಕುರಿತು ಕೋಟಿ ಚೆನ್ನಯ, ಕಾಚು ಕುಜುಂಬ, ಬಟ್ಟೆನಾಯಕ ಚಾಕು ಚಂದು ಮೂಕಾದವರ ಲೌಕಿಕ ಮತ್ತು ಅಲೌಕಿಕ ಇತಿಹಾಸ ಕೊಡಲಾಗಿದೆ.
ರೂ 40 ಸಾವಿರದ ದತ್ತು ನಿಧಿ ಸ್ಥಾಪಿಸಿ ಇಂದ್ರಚೆ, ಎಣ್ಮೂರು, ಪಡ್ಡಿನಂಗಡಿ, ಪಂಜ ಎಡಮುಂಗಲ ಪ್ರಾಥಮಿಕ ಶಾಲೆಗಳ ಪ್ರತಿಭಾ ಪುರಸ್ಕಾರವಾಗಿ ಬಡ್ಡಿ ಹಣವನ್ನು ನೀಡಲಾಗುವುದು.
ಕಲ್ಮಡ್ಕ ಪಂಚಾಯತು ಕ್ಷೇತ್ರದ ಜನಪದರು ತಮ್ಮ ಸಾಮಾಜಿಕ ಸಭೆ ಸಮಾರಭಕ್ಕೆ 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ಸಭಾಮಂದಿರವನ್ನು ದಾನವಾಗಿ ನೀಡಲಾಗುತ್ತದೆ.
ಕೋಟಿ ಚೆನ್ನಯ ಮತ್ತು ಉಲ್ಲಾಕುಳು ಕ.ಊ.ಆ ಗ್ರಂಥಾಕಾರರಿಗೆ ಮಾಹಿತಿ ಒದಗಿಸಿದ್ದು
ಡಿ. ಜಿ ನಡ್ಕರೇ ಆಗಿದ್ದಾರೆ.
*************************